ಭೋಪಾಲ್: ಲೋಕಸಭೆ ಚುನಾವಣೆ ಪ್ರಾರಂಭದಿಂದಲೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಬಿಜೆಪಿ ಭೋಪಾಲ್ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಗೆಲುವು ಖಚಿತವಾಗಿದೆ
ಕಾಂಗ್ರೆಸ್ ಹಿರಿಯ ಧುರೀಣ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ಸಿಂಗ್ರನ್ನು ಮಣಿಸಿದ ಪ್ರಗ್ಯಾ ಸಿಂಗ್ ಲೋಕಸಭೆ ಪ್ರವೇಶಿಸಲಿದ್ದಾರೆ
ರಾಷ್ಟ್ರಪಿತ ಗಾಂಧಿ ಹಂತಕ ಗೋಡ್ಸೆ ಪರ ಹೇಳಿಕೆ ನೀಡಿ ಸುದ್ದಿಯಾಗಿದ್ದ ಪ್ರಗ್ಯಾಸಿಂಗ್ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದ್ದರು.ಪ್ರಧಾನಿ ಮೋದಿ, ಅಮಿತ್ ಶಾ ಅವರೂ ಸಹ ಗಾಂಧಿ ಅವರನ್ನು ತೆಗಳಿ ಗೋಡ್ಸೆ ಸಮರ್ಥನೆ ಮಾಡಿಕೊಂಡ ಪ್ರಗ್ಯಾಸಿಂಗ್ ವಿರುದ್ಧ ಕಿಡಿ ಕಾರಿದ್ದರು.