ಕರ್ನಾಟಕ

ಇದು ನೆಹರು ಸರ್ಕಾರವಲ್ಲ, ಮೋದಿ ಸರ್ಕಾರ: ಒಮರ್ ಅಬ್ದುಲ್ಲಾ ಕನಸು ಎಂದಿಗೂ ಈಡೇರುವುದಿಲ್ಲ: ತೇಜಸ್ವಿ ಸೂರ್ಯ

Shilpa D
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕೆಂಬ ಒಮರ್ ಅಬ್ದುಲ್ಲಾ ಅವರ  ಕನಸು ಎಂದಿಗೂ ನೇರವೇರುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಇದು ನೆಹರೂ ಸರ್ಕಾರವಲ್ಲ, ನರೇಂದ್ರ ಮೋದಿ ಸರ್ಕಾರ, ಒಮರ್ ಅಬ್ದುಲ್ಲಾ ಕನಸು ಎಂದಿಗೂ ನೆರವೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಉತ್ತರ ಕಾಶ್ಮೀರದ ಬಂಡಿಪೂರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಓಮರ್​ ಅಬ್ದುಲ್ಲಾ ‘ತಮ್ಮ ಪಕ್ಷ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಮೇಲೆ ದಾಳಿಯಾಗಲು ಬಿಡುವುದಿಲ್ಲ ಮತ್ತು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಸ್ಥಾನ ಸೇರಿದಂತೆ ನಮಗೆ ನ್ಯಾಯವಾಗಿ ಸಿಗಬೇಕಿರುವುದನ್ನು ಮರಳಿ ಪಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು.
SCROLL FOR NEXT