ಕರ್ನಾಟಕ

ಮಂಡ್ಯ: ಚುನಾವಣೆ ಪ್ರಚಾರಕ್ಕೆ ಮಾಜಿ ಸಂಸದ ಮಾದೇಗೌಡರಿಂದ ಹಣಕ್ಕೆ ಬೇಡಿಕೆ, ಆಡಿಯೋ ಬಹಿರಂಗ

Nagaraja AB

ಮಂಡ್ಯ:  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಜಿ. ಮಾದೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರಿಗೆ ಕರೆ ಮಾಡಿ ಹಣದ ವ್ಯವಸ್ಥೆ ಮಾಡುವಂತೆ ಕೇಳಿರುವ ಆಡಿಯೋ ಟೇಪ್ ಬಹಿರಂಗವಾಗಿರುವುದು ವರದಿಯಾಗಿದೆ.

ಪ್ರಚಾರಕ್ಕೆ ತೆರಳಲು ಹುಡುಗರು ಹಣ ಕೇಳುತ್ತಾರೆ. ನನ್ನ ಬಳಿ ಹಣ ಇಲ್ಲ. ಹಣಕ್ಕೆ ವ್ಯವಸ್ಥೆ ಮಾಡಿ ಎಂದು ಮಾದೇಗೌಡರೇ ನೇರವಾಗಿಯೇ ಸಚಿವ ಪುಟ್ಟರಾಜು ಅವರನ್ನು ಕೇಳಿದ್ದಾರೆ. ಅಲ್ಲದೆ ಹಣದ ಬೇಡಿಕೆ ಇಟ್ಟಿದ್ದನ್ನು ಟಿವಿ ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದಾರೆ.

ಈಗ ಹಣ ಇಲ್ಲದೆ ಚುನಾವಣೆಗೆ ಹೋಗುವವರು  ದೇಶದಲ್ಲಿ ಯಾರಿದ್ದಾರೆ ನೀವೆ ತಿಳಿಸಿ ಎಂದು ಮಾದೇಗೌಡರು ಖಾಸಗಿ ಟಿವಿ ಚಾನೆಲ್ ಗೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಚುನಾವಣಾ ಆಯೋಗದ ನಿಯಮದ ಪ್ರಕಾರವೇ ಒಬ್ಬ ಅಭ್ಯರ್ಥಿ 70 ಲಕ್ಷ ರೂಪಾಯಿವರೆಗೂ ಅಧಿಕೃತವಾಗಿ ಖರ್ಚು ಮಾಡಲು ಅವಕಾಶವಿದೆ. ಅದರ ಆಧಾರದಲ್ಲೇ ಹಣ ಕೇಳಿರಬಹುದು, ಅದನ್ನು ಕೊಡುವುದರಲ್ಲೂ ತಪ್ಪಿಲ್ಲ ಎಂದಿದ್ದಾರೆ.
SCROLL FOR NEXT