ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 92 ಮತಗಟ್ಟೆಗಳ ಮತದಾರರು ಏಪ್ರಿಲ್ 23 ರಂದು ಲೋಕಸಭಾ ಚುನಾವಣೆಗೆ ಮತ ಚಲಾಯಿಸುವ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತೆ "ಹಳೆಯ ಕಾಲಕ್ಕೆ" ತೆರಳಬೇಕಾಗುತ್ತದೆ. ಸೆಲ್ ಫೋನ್ ಕವರೇಜ್ ಸಿಕ್ಕದ, ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಸಹ ಸರಿಯಾದ ರಸ್ತೆಗಳಿಲ್ಲ.ಹಾಗಾಗಿ ಸಾಮಾನ್ಯ ಸಂಪರ್ಕಕ್ಕೆ ಸಹ ಪರದಾಡುವ ಸ್ಥಿತಿ ಏರ್ಪಡಲಿದೆ.
ಉತ್ತರ ಕನ್ನಡ ಜಿಲ್ಲೆಯ ಸುಮಾರು 80% ದಟ್ಟ ಕಾಡುಗಳಿದ್ದು ಹೊಂದಿದ್ದು ಈ ಅರಣ್ಯ ಪ್ರದೇಶದಲ್ಲಿರುವ ಹಳ್ಳಿಗಳು ಜಿಲ್ಲೆಯ ಪ್ರಧಾನ ಕೇಂದ್ರದೊಡನೆ ಸಂಪರ್ಕ ಸಾಧಿಸಲು ಸಹ ಕಠಿಣ ಸವಾಲನ್ನೆದುರಿಸಬೇಕಿದೆ.. ಜಿಲ್ಲೆಯಲ್ಲಿ 1,437 ಬೂತ್ ಗಳು ಇಂತಹಾ ಸಂಪರ್ಕ ರಹಿತ ಕತ್ತೆಲ ಪ್ರದೇಶದಲ್ಲಿ ಬರಲಿದೆ.ಇಲ್ಲಿ ಮೊಬೈಲ್ ಅಥವಾ ಲ್ಯಾಂಡ್ ಲೈನ್ ಸಂಪರ್ಕ ಇಲ್ಲ.ಈ ಸಮಯದಲ್ಲಿ ಪರಸ್ಪರ ಸಂಪರ್ಕಕ್ಕಾಗಿ ರನ್ನರ್ ಗಳನ್ನು ಬಳಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅವರಲ್ಲಿ ಹೆಚ್ಚಿನವರು ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುತ್ತಾರೆ ಇಲ್ಲದೆ ಸ್ಥಳೀಯ ನೆಟ್ ವರ್ಕ್ ಗಳು, ಮೊಬೈಲ್ ನೆಟ್ ವರ್ಕ್ ಗೆ ಸಂಪರ್ಕಿಸಲು ಸಾಧ್ಯವಾಗುವೆಡೆಗಳಲ್ಲಿ ಇವರನ್ನು ನೇಮಿಸಲಾಗುವುದು. ಇದಕ್ಕಾಗಿ ಸಹಾಯಕರನ್ನು ಬೂತ್ ಗಳಲ್ಲಿ ನಿಯೋಜಿಸಲಾಗುವುದು ಜಿಲ್ಲಾ ಪ್ರಧಾನ ಕಛೇರಿಯಿಂದ ಸೂಚನೆ ಪಡೆದ ಬಳಿಕ ಈ ರನ್ನರ್ ಗಳು ಬೂತ್ ಗಳಿಗೆ ತೆರಳಲಿದ್ದಾರೆ.ಹಾಗೂ ಸಂದೇಶವನ್ನು ವೈಯುಕ್ತಿಕವಾಗಿ ತಲುಪಿಸಲಿದ್ದಾರೆ.ಇದಕ್ಕಾಗಿ ಇಂತಹಾ ರನ್ನರ್ ಗಳಿಗೆ ಪೆಟ್ರೋಲ್, ಆಹಾರ ಹಾಗೂ ಕೆಲವಷ್ಟು ಹಣ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಉಪ ಕಮೀಷನರ್ ಹರೀಶ್ ಕುಮಾರ್ ಕೆ.ಹೇಳಿದ್ದಾರೆ.
ರನ್ನರ್ ಗಳನ್ನು ಎರಡೂ ಬೂತ್ ಗಳ ಸಂವಹನಕ್ಕೆ ಅನುಕೂಲವಾಗುವಂತೆ ಒಂದೆರಡು ಮೈಲುಗಳಿಗಿಂತ ಕಡಿಮೆ ವ್ಯಾಪ್ತಿಯಲ್ಲಿ ಇರಿಸಲಾಗುವುದು. ಹಾಗೆಯೇ ಇಂತಹಾ ಪ್ರದೇಶಗಳಲ್ಲಿ ವಾಹನ ಸಂಚಾರ ಯೋಗ್ಯ ರಸ್ತೆಗಳಿರಲಿದೆ.ಚುನಾವಣೆ ನಡೆಯುವ ಭಾಗ ವಾದ ಎಲ್ಲಾ 92 ಬೂತ್ ಗಳಲ್ಲಿ ಪ್ರಯೋಗಾತ್ಮಕ ರನ್ನರ್ ಗಳನ್ನು ನೇಮಕ ಮಾಡಲಾಗಿದೆ.ಆ ವೇಳೆ ತಾಂತ್ರಿಕ ತೊಂದರೆಗಳನ್ನು ಸಾಧ್ಯವಾದಷ್ಟು ಬಗೆಹರಿಸಲಾಗಿದೆ.
ಪತ್ರಿಕೆಯೊಡನೆ ಮಾತನಾಡಿದ ಕಾರವಾರ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ್ "ಯಾವ ಸ್ಥಳೀಯರಿಗೆ ಮ್ಮೊಬೈಲ್ ನೆಟ್ ವರ್ಕ್ ಸಿಕ್ಕುವ ಜಾಗಗಳ ಬಗ್ಗೆ ಸ್ಪಷ್ಟ ಅರಿವಿದೀಯೋ ಅಂತಹವರನ್ನು ಸಂಪರ್ಕಿಸಿ ಅವರ ಮೂಲಕ ನಾವು ಆಡಳಿತವನ್ನು ಸಂಪರ್ಕಿಸಲು ಪ್ರಯತ್ನಿಸುವೆವೆಉ"
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos