ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಹೊಸ ಮಹಾಘಟ್ ಬಂಧನ! 
ಕರ್ನಾಟಕ

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಹೊಸ 'ಮಹಾಘಟ್ ಬಂಧನ್'!

ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಲ್ಲಿ ಹಿರಿಯ ನಟಿ ಸುಮಲತಾ ಮುಂದಾಳತ್ವದಲ್ಲಿರುವ ...

ಮೈಸೂರು: ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಲ್ಲಿ ಹಿರಿಯ ನಟಿ ಸುಮಲತಾ ಮುಂದಾಳತ್ವದಲ್ಲಿರುವ ಮಹಾಘಟ್ ಬಂಧನದ ವಿರೋಧಿಯಾಗಿದ್ದಾರೆ.
ಸುಮಲತಾ ಅವರ ಈ ಮಹಾಘಟಬಂಧನ ಮಂಡ್ಯ ಜಿಲ್ಲೆಯಲ್ಲಿ 8 ಶಾಸಕರು ಹಾಗೂ ಮೂರು ಸಚಿವರು ಎಂಎಲ್ ಸಿಗಳಿಗೆ ದೊಡ್ಡ ಸವಾಲಾಗಿದೆ. 
ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೊದಲು ಎಲ್ಲಾ ರೀತಿಯಲ್ಲಿಯೂ ಲೆಕ್ಕಾಚಾರ ಹಾಕಿಕೊಂಡೇ ಕಣಕ್ಕಿಳಿದಿದ್ದಾರೆ, ಬಿಜೆಪಿ, ರೈತ ಸಂಘ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಅಹಿಂದ ಮತ್ತು ಮಹಿಳಾ ಸಂಘಗಳು ಹಾಗೂ ಎಲ್ಲಾ ಪಕ್ಷದಲ್ಲಿರುವ ಅಂಬರೀಷ್ ಅಭಿಮಾನಿಗಳು ಸುಮಲತಾ ಅವರನ್ನು ಬೆಂಬಲಿಸುತ್ತಿದ್ದಾರೆ. 
ಇದೇ ವೇಳೆ ಮಂಡ್ಯಕ್ಕೆ ಅಂಬರೀಷ್ ಕೊಡುಗೆ ಏನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ, ಟಿಕೆಟ್ ಗಾಗಿ ಸುಮಲತಾ ಕಾಂಗ್ರೆಸ್ ಬಾಗಿಲು ಬಡಿದರು, ಜೊತೆಗೆ ಮಂಡ್ಯದ್ಯಾಂತ ಸಂಚರಿಸಿ ಜನತೆಯ ಮನಸ್ಸಿನ ನಾಡಿ ಮಿಡಿತ ಹಾಗೂ ಅವರು ಆಸೆಯನ್ನು ಅರಿತಕೊಂಡಿದ್ದಾರೆ. 
ಭ್ರಷ್ಟಚಾರ ನಿರ್ಮೂಲನೆ, ರಾಜಕೀಯದಲ್ಲಿ ಜಾತಿ ಲೆಕ್ಕಾಚಾರಗಳ ವಿರುದ್ಧ ಹೋರಾಡುವುದಾಗಿ ಸುಮಲತಾ ಹೇಳಿಗ್ಗಾರೆ, ಸ್ವತಂತ್ರ್ಯವಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು, ಒಕ್ಕಲಿಗ ಮತಗಳ ನಂತರ, ಅಲ್ಪಸಂಖ್ಯಾತ ವರ್ಗವಾದ ಕ್ರಿಶ್ಟಿಯನ್, ದಲಿತರ ಮತಗಳು ಪ್ರಮುಖಲಾಗಿವೆ.
ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ,ಸುಮಲತಾ ಅವರಿಗೆ ಬೆಂಬಲಿಸುತ್ತಿದ್ದ ಸ್ಥಳೀಯ ಮುಖಂಡರನ್ನು ಅಮಾತುಗೊಳಿಸಿದ ನಂತರ ಸುಮಲತಾ ಬಿಜೆಪಿ ಬೆಂಬಲ ಕೋರಿದ್ದಾರೆ, ಜೊತೆಗೆ, ರೈತ ಸಂಘದ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ್ ಕುಟುಂಬದ  ಬೆಂಬಲ ಕೋರಿದ್ದಾರೆ. ಕೇವಲ ಒಕ್ಕಲಿಗರು ಹಾಗೂ ಸಿನಿಮಾ ರಂಗದವರು ಮಾತ್ರವಲ್ಲದೆ ಹಿಂದುಳಿದ ಹಾಗೂ ಎಲ್ಲ ಮುಖಂಡರು ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರಚಾರ ನಡೆಸಲು ಸಚಿವ ಡಿ.ತೆ ಶಿವಕುಮಾರ್ ಅವರ ಸಹಾಯ ಪಡೆಯುತ್ತಿದ್ದಾರೆ, ಇದೇ ವೇಳೆ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಆದರೆ ಇದರ ವಿರುದ್ದ ಸುಮಲತಾ ಯಾವುದೇ ರೀತಿಯಲ್ಲಿ ಕೋಪಗೊಳ್ಳದೇ ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ, ಎದುರಾಳಿ ಪಕ್ಷದ ತೋಳ್ಬಲ ಮತ್ತು ಹಣ ಬಲದ ಬಗ್ಗೆ ಅರಿತಿರುವ ಸುಮಲತಾ ಅವರು ಬುದ್ದಿವಂತಿಕೆಯಿಂದ ಪರಿಸ್ಥಿತಿಯನ್ನ ನಿಭಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT