ಕರ್ನಾಟಕ

ತೇಜಸ್ವಿನಿ ಅವರಿಗೆ ಟಿಕೆಟ್​ ತಪ್ಪಿದ್ದು ವೈಯಕ್ತಿಕವಾಗಿ ನೋವಾಗಿದೆ: ಮಾಜಿ ಸಿಎಂ ಜಗದೀಶ್​ ಶೆಟ್ಟರ್

Sumana Upadhyaya
ಬೆಂಗಳೂರು: ಅಂತಿಮ ಕ್ಷಣದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದು ಬೇಸರವಾಗಿದೆ ಎಂದು ಮಾಜಿ ಸಿಎಂ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಅವರು ನಿನ್ನೆ ಬೆಂಗಳೂರಿನ ಜಯನಗರದಲ್ಲಿರುವ ಅನಂತ್ ಕುಮಾರ್ ಅವರ ಮನೆಗೆ ತೆರಳಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅವರಿಗೆ ಸಮಾಧಾನದ ಮಾತುಗಳನ್ನಾಡಿ ಹೊರಬಂದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕರ್ನಾಟಕದ ಬಿಜೆಪಿ ರಾಜಕೀಯದಲ್ಲಿ ಅನಂತ್ ಕುಮಾರ್ ಅವರ ಕೆಲಸ ಮತ್ತು ಸಾಧನೆ ಮಹತ್ತರವಾದದ್ದು. ಅವರ ಪತ್ನಿ ಕೂಡ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ಮತ್ತು ಅನಂತ್ ಕುಮಾರ್ ಒಂದೇ ರಾಜಕೀಯ ಗರಡಿಯಲ್ಲಿ ಬೆಳೆದವರು, ಅವರು ನನಗೆ ಗುರು, ಮಾರ್ಗದರ್ಶಕರಾಗಿದ್ದರು. ಅಲ್ಲದೆ ಅವರು ಕೂಡ ಹುಬ್ಬಳ್ಳಿಯವರಾದದ್ದರಿಂದ ನಮ್ಮ ಒಡನಾಟ ಚೆನ್ನಾಗಿತ್ತು.
SCROLL FOR NEXT