ಚೆನ್ನೈ: ಲೋಕಸಭೆ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿರುವ ಬಿಜೆಪಿ ಹಾಗೂ ನರೇಂದ್ರ ಮೋದಿಗೆ ದಕ್ಷಿಣ ಬಾರತ ಖ್ಯಾತ ನಟ, ತಲೈವ ರಜನಿಕಾಂತ್ ಶುಭ ಕೋರಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ತಾವು ಟ್ವೀಟ್ ಮಾಡಿ "ಪ್ರೀತಿಯ ನರೇಂದ್ರ ಮೋದಿಜಿ ನಿಮಗೆ ಹೃತ್ಪೂರ್ವಕ ಧನ್ಯವಾದ. ನೀವು ಗಳಿಸಿಕೊಂಡಿದ್ದೀರಿ. ದೇವರ ಆಶೀರ್ವಾದ ನಿಮಗೆ ದೊರಕಲಿ" ಎಂದಿದ್ದಾರೆ.
ಪ್ರಧಾನಿ ಮೋದಿಗೆ ನೇತೃತ್ವದ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೇರಲಿದ್ದು ಈ ಚುನಾವಣೆಯಲ್ಲಿ ಎನ್ಡಿಎ ಸ್ಪಷ್ಟ ಬಹುಮತ ಗಳಿಸುವತ್ತ ದಾಪುಗಾಲು ಹಾಕಿದೆ.