ಸಂಗ್ರಹ ಚಿತ್ರ 
ಫೀಫಾ ವಿಶ್ವ ಕಪ್ 2018

2017ರ ಭಾರತೀಯ ಫುಟ್ಬಾಲ್ ಸಂಸ್ಥೆಯ ಪ್ರಶಸ್ತಿ ಪ್ರಕಟ: ಸುನಿಲ್ ಚೇಟ್ರಿಗೆ ವರ್ಷದ ಆಟಗಾರ ಪ್ರಶಸ್ತಿ ಗರಿ

ಭಾರತೀಯ ಫುಟ್ಬಾಲ್ ಸಂಸ್ಥೆ (ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್-IAFF) ತನ್ನ 2017ನೇ ಸಾಲಿನ ಪ್ರಶಸ್ತಿ ಪ್ರಕಟ ಮಾಡಿದ್ದು, ಭಾರತ ತಂಡದ ಸ್ಟಾರ್ ಆಟಗಾರ ಸುನಿಲ್ ಚೇಟ್ರಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈ: ಭಾರತೀಯ ಫುಟ್ಬಾಲ್ ಸಂಸ್ಥೆ (ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್-IAFF) ತನ್ನ 2017ನೇ ಸಾಲಿನ ಪ್ರಶಸ್ತಿ ಪ್ರಕಟ ಮಾಡಿದ್ದು, ಭಾರತ ತಂಡದ ಸ್ಟಾರ್ ಆಟಗಾರ ಸುನಿಲ್ ಚೇಟ್ರಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
33ವರ್ಷದ ಸುನಿಲ್ ಚೇಟ್ರಿ ಇತ್ತೀಚೆಗಷ್ಟೇ ತಮ್ಮ ನೂರನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಭಾರತದ ಪರ 100 ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು. ಇದಕ್ಕೂ ಮೊದಲು ಭಾರತದ ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರು ಭಾರತದ ಪರ 100 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಚೇಟ್ರಿ ಅಪೂರ್ವ ಸಾಧನೆಗಾಗಿ ಐಎಎಫ್ಎಫ್ ಸಂಸ್ಥೆ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ಇದೇ ಚೇಟ್ರಿ ಬೆಂಗಳೂರು ಎಫ್ ಸಿ ತಂಡದ ಪರ ಆಡುತ್ತಿದ್ದಾರೆ.
ಅಂತೆಯೇ ಭಾರತದ ಮಹಿಳಾ ಫುಟ್ಬಾಲ್ ನ ಸ್ಟಾರ್ ಆಟಗಾರ್ತಿ ಕಮಲಾದೇವಿ ಅವರೂ ಕೂಡ ಮಹಿಳೆಯರ ತಂಡದಿಂದ ವರ್ಷದ ಆಟಗಾರ್ತಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿದಂತೆ ಈ ಹಿಂದೆ ನಡೆದ ನಾಲ್ಕು ರಾಷ್ಟ್ರಗಳ ಇಂಟರ್ ಕಾಂಟಿನೆಂಟಲ್  ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಯುವ ಆಟಗಾರ ಅನಿರುದ್ಧ ತಾಪಾ 2017ನೇ ಸಾಲಿನ ಅತ್ಯುತ್ತಮ ಉದಯೋನ್ಮುಖ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದೇ ರೀತಿ ಮಹಿಳಾ ತಂಡ ಯುವ ಆಟಗಾರ್ತಿ ಇ ಪಂತೋಯ್ ಅವರು ಮಹಿಳೆಯರ ವಿಭಾಗದ ಉದಯೋನ್ಮುಖ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕೇರಳ ಫುಟ್ಬಾಲ್ ಸಂಸ್ಥೆಗೆ ಈ ಬಾರಿಯೂ ಉತ್ತಮ ಕ್ರೀಡಾಭಿವೃದ್ಧಿ ಕಾರ್ಯಕ್ರಮಗಳ ನೀಡಿದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಅಂತೆಯೇ ಭಾರತೀಯ ಫುಟ್ಬಾಲ್ಗೆ ದೀರ್ಘಕಾಲದ ಕೊಡುಗೆ ನೀಡಿದ ಅತ್ಯುತ್ತಮ ಸಂಸ್ಥೆ ವಿಭಾಗದಲ್ಲಿ ಖ್ಯಾತ ದ್ವಿಚಕ್ರವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ಗೆ ಪ್ರಶಸ್ತಿ ದಕ್ಕಿದೆ. 2017ನೇ ಸಾಲಿನ ಉತ್ತಮ ರೆಫರಿ ವಿಭಾಗದಲ್ಲಿ ಸಿಆರ್ ಕೃಷ್ಣನ್ ಮತ್ತು 2017ನೇ ಸಾಲಿನ ಸಹಾಯಕ ರೆಫರಿ ವಿಭಾಗದಲ್ಲಿ ಅಸ್ಸಾಂನ ಸುಮಂತಾ ದತ್ತಾ ಅವರಿಗೆ ಪ್ರಶಸ್ತಿ ಲಭಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT