ಬೆಲ್ಜಿಯಂ ಆಟಗಾರ ಮಿಚಿ ಬತ್ಸುಯಿ ಯಡವಟ್ಟು 
ಫೀಫಾ ವಿಶ್ವ ಕಪ್ 2018

ಸಂಭ್ರಮಾಚರಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಬೆಲ್ಜಿಯಂ ಆಟಗಾರ

ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಅನೌಪಚಾರಿಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಗೆದ್ದು ಅಗ್ರಸ್ಥಾನಕ್ಕೇರಿತಾದರೂ, ಪಂದ್ಯದ ಕೊನೆಯಲ್ಲಿ ಆ ತಂಡದ ಆಟಗಾರ ಮಾಡಿಕೊಂಡ ಯಡವಟ್ಟು ಇದೀಗ ಟ್ವಿಟರ್ ನಲ್ಲಿ ನಗೆಪಾಟಲಿಗೀಡಾಗಿದೆ.

ಮಾಸ್ಕೋ: ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಅನೌಪಚಾರಿಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಗೆದ್ದು ಅಗ್ರಸ್ಥಾನಕ್ಕೇರಿತಾದರೂ, ಪಂದ್ಯದ ಕೊನೆಯಲ್ಲಿ ಆ ತಂಡದ ಆಟಗಾರ ಮಾಡಿಕೊಂಡ ಯಡವಟ್ಟು ಇದೀಗ ಟ್ವಿಟರ್ ನಲ್ಲಿ ನಗೆಪಾಟಲಿಗೀಡಾಗಿದೆ.
ಜಿ ಗುಂಪಿನಿಂದ ಅಗ್ರ 2 ತಂಡಗಳಾಗಿ ಈಗಾಗಲೇ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವ ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ 1-0 ಅಂತರದಲ್ಲಿ ಜಯ ಸಾಧಿಸಿ ಗ್ರೂಪ್ ನ ಅಗ್ರಸ್ಥಾನಿಯಾಗಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು. ಆದರೆ ಪಂದ್ಯದ ಕೊನೆಯಲ್ಲಿ ಈ ತಂಡದ ಆಟಗಾರ ಮಿಚಿ ಬತ್ಸುಯಿಯ ವಿಶೇಷ ಸಂಭ್ರಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ.
ಬೆಲ್ಜಿಯಂ ತಂಡ ಇಂಗ್ಲೆಂಡ್ ವಿರುದ್ಧ 1-0 ಅಂರದಲ್ಲಿ ಜಯ ಸಾಧಿಸಿತು. ಪಂದ್ಯದ 90ನೇ ನಿಮಿಷದಲ್ಲಿ ಆಟ ಮುಕ್ತಾಯವಾದಾಗ ಬೆಲ್ಜಿಯಂ ತಂಡದ ಆಟಗಾರ ಮಿಚಿ ಬತ್ಸುಯಿ ಸಂಭ್ರಮಸಿವುದಕ್ಕಾಗಿ ಚೆಂಡನ್ನು ಗೋಲ್ ಪೋಸ್ಚ್ ನತ್ತ ಬಲವಾಗಿ ಒದ್ದಿದ್ದ. ಆತನ ಟಾರ್ಗೆಟ್ ಚೆಂಡನ್ನು ಗೋಲ್ ಪೋಸ್ಟ್ ನೊಳಗೆ ನುಗ್ಗಿಸುವುದಾಗಿತ್ತಾದರೂ, ಆತನ ದುರಾದೃಷ್ಟ ಚೆಂಡ ಗೋಲ್ ಬಾಕ್ಸ್ ನ ಕಂಬಕ್ಕೆ ಬಡಿದು ವಾಪಸ್ ಬೌನ್ಸ್ ಆಗಿ ಆತನ ಮುಖಕ್ಕೆ ಬಡಿದಿದೆ.
ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಕೆಲ ಕ್ಷಣಗಳ ಕಾಲ ನಗೆಗಡಲಲ್ಲಿ ತೇಲಾಡಿದ್ದರು. ಈ ಘಟನೆಯಿಂದ ಕೆಲ ಕ್ಷಣಗಳಕಾಲ ವಿಚಲಿತನಾಗಿದ್ದ ಮಿಚಿ ಬತ್ಸುಯಿ ಬಳಿಕ ಡ್ರೆಸಿಂಗ್ ರೂಂ ಸೇರಿಕೊಂಡಿದ್ದ. ಈದಾದ ಕೆಲವೇ ಗಂಟೆಗಳಲ್ಲಿ ಟ್ವಿಟರ್ ನಲ್ಲಿ ಪ್ರತ್ಯಕ್ಷನಾಗಿದ್ದ ಮಿಚಿ ಬತ್ಸುಯಿ, 'ನನ್ನ ಸಂಭ್ರಮ ಕೊಂಚ ಮಿತಿ ಮೀರಿತು..  ಹೀಗಾಗಿ ನನಗೆ ತಕ್ಕ ಶಾಸ್ತಿಯಾಯಿತು. ನಾನೇಕೆ ಮೂರ್ಖನಾದೆ ಎಂದು ಹಾಸ್ಯಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT