- ಟೊಮೆಟೋ ಹಣ್ಣು -3-4
- ಹುಣಸೆಹಣ್ಣು - ಸ್ವಲ್ಪ
- ತೊಗರಿ ಬೇಳೆ - ಸ್ವಲ್ಪ
- ತೆಂಗಿನಕಾಯಿ ತುರಿ - ಸ್ವಲ್ಪ
- ದನಿಯಾ ಪುಡಿ- ಅರ್ಧ ಚಮಚ
- ಜೀರಿಗೆ- ಸ್ವಲ್ಪ
- ಕಾಳು ಮೆಣಸು- ಸ್ವಲ್ಪ
- ಕಡಲೆಬೇಳೆ- ಸ್ವಲ್ಪ
- ಒಣಗಿದ ಮೆಣಸಿನಕಾಯಿ- 5-6
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ತೊಗರಿ ಬೇಳೆಯನ್ನು ಬೇಯಿಸಿಟ್ಟುಕೊಂಡಿರಬೇಕು. ಮೊದಲಿಗೆ ದನಿಯಾ, ಎರಡು ಒಣಗಿದ ಮೆಣಸಿನ ಕಾಯಿ, ಕಾಳು ಮೆಣಸು, ಜೀರಿಗೆ, ಕಡಲೆಬೇಳೆಯನ್ನು ಸಣ್ಣ ಹುರಿಯಲ್ಲಿ ಹುರಿದುಕೊಂಡು ನಂತರ, ತುರಿದ ತೆಂಗಿನ ತುರಿಯನ್ನು ಸೇರಿಸಿ ಕೆಂಪಗೆ ಹುರಿದುಕೊಳ್ಳಬೇಕು.
- ನೀರಿನ ಅಂಶವೆಲ್ಲಾ ಹೋದ ಮೇಲೆ ಮಿಕ್ಸಿ ಜಾರ್ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಟೊಮೆಟೋ ರಸ ಹಾಗೂ ಹುಣಸೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
- ಇದಕ್ಕೆ ಈ ಮೊದಲೇ ಬೇಯಿಸಿಟ್ಟುಕೊಂಡ ತೊಗರಿಬೇಳೆ, ತಯಾರು ಮಾಡಿಕೊಂಡ ಪೌಡರ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಕುದಿಸಿದರೆ, ಮೈಸೂರು ಸಾರು ಸವಿಯಲು ಸಿದ್ಧ.