- ಕೊಬ್ಬರಿ ಎಣ್ಣೆ- 2 ಚಮಚ
- ಮೆಂತ್ಯ- ಅರ್ಧ ಚಮಚ
- ದನಿಯಾ- 20 ಗ್ರಾಂ
- ಜೀರಿಗೆ- 1 ಚಮಚ
- ಒಣಗಿದ ಮೆಣಸಿನ ಕಾಯಿ- 25
- ಕರಿಬೇವು- ಸ್ವಲ್ಪ
- ಇಂಗು- ಕಾಲು ಚಮಚ
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1
- ಹಸಿಮೆಣಸಿನ ಕಾಯಿ- 1-2
- ಬೆಲ್ಲ- ಸ್ವಲ್ಪ
- ಅರಿಶಿನದ ಪುಡಿ- ಸ್ವಲ್ಪ
- ಹುಣಸೆಹಣ್ಣು- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ತೊಗರಿ ಬೇಳೆ- 1 ಬಟ್ಟಲು
- ಕಾಯಿ ತುರಿ- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ಕೊಬ್ಬರಿ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಮೆಂತ್ಯೆ, ದನಿಯಾ, ಜೀರಿಗೆ, ಇಂಗು, ಕರಿಬೇವು, ಒಣಗಿದ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ಇದು ಸಂಪೂರ್ಣವಾಗಿ ತಣ್ಣಗಾದ ಬಳಿಕ ಪುಡಿ ಮಾಡಿಟ್ಟುಕೊಳ್ಳಬೇಕು.
- ನಂತರ ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ 1 ಚಮಚ ಕೊಬ್ಬರಿ ಎಣ್ಣೆ, ಟೊಮೆಟೋ, ಮೆಣಸಿನ ಕಾಯಿ, ಬೆಲ್ಲ, ಅರಿಶಿನದ ಪುಡಿ, ಕರಿಬೇವು, ಹುಣಸೆ ರಸ, ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಂಡು 10 ನಿಮಿಷ ಬಿಡಬೇಕು.
- ನಂತರ 2 ಬಟ್ಟಲು ನೀರು, ಬೇಯಿಸಿಕೊಂಡ ತೊಗರಿಬೇಳೆ ಹಾಕಿ 5 ನಿಮಿಷ ಕುದಿಸಬೇಕು. ಇದು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆಯೇ ಈ ಹಿಂದೆ ಹುರಿದು ಪುಡಿ ಮಾಡಿಕೊಂಡ ಮಸಾಲೆ ಪುಡಿಯನ್ನು 3 ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಕೊಬ್ಬರಿ ತುರಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ 2 ನಿಮಿಷ ಕುದಿಸಿ, ಸಾಸಿವೆ, ಕರಿಬೇವು, ಒಣಗಿದ ಮೆಣಸಿನ ಕಾಯಿ, ಇಂಗು ಹಾಕಿ ಒಗ್ಗರಣೆ ಕೊಟ್ಟು ಇದಕ್ಕೆ ಮಿಶ್ರಣ ಮಾಡಿದರೆ ರುಚಿಕರವಾದ ಉಡುಪಿ ಟೊಮೆಟೋ ಸಾರು ಸವಿಯಲು ಸಿದ್ಧ.