- ಸುವರ್ಣ ಗಡ್ಡೆ- ಕಾಲು ಕೆಜಿ
- ಏಲಕ್ಕಿ-1
- ಹಸಿಮೆಣಸಿನ ಕಾಯಿ -2
- ದನಿಯಾ ಪುಡಿ - 1 ಚಮಚ
- ಅರಿಶಿನ- ಸ್ವಲ್ಪ
- ಉಪ್ಪು, ಅಚ್ಛ ಖಾರದ ಪುಡಿ- ರುಚಿಗೆ ತಕ್ಕಷ್ಟು
- ಜೀರಿಗೆ-ಅರ್ಧ ಚಮಚ
- ಮೊಸರು- ಅರ್ಧ ಬಟ್ಟಲು
- ಶುಂಠಿ- ಸ್ವಲ್ಪ
- ಸಕ್ಕರೆ- ಅರ್ಧ ಚಮಚ
- ಸಾಸಿವೆ- ಸ್ವಲ್ಪ
- ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು ಉಪ್ಪು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೇಯಿಸುವಾಗ ಒಂದು ಚಮಚ ವಿನಿಗರ್ ಹಾಕಿ.
- ಸುವರ್ಣಗಡ್ಡೆ ಚೆನ್ನಾಗಿ ಬೆದ ಬಳಿಕ ನೀರನ್ನು ಬಸಿದಿಟ್ಟುಕೊಳ್ಳಿ. ನಂತರ ಜೀರಿಗೆ, ಏಲಕ್ಕಿ, ಶುಂಥಿ ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ.
- ರುಬ್ಬಿದ ಮಿಶ್ರಣಕ್ಕೆ ಮೊಸರು, ದನಿಯಾ ಪುಡಿ, ಉಪ್ಪು, ಸಕ್ಕರೆ, ಅಚ್ಚ ಖಾರದಪುಡಿ, ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಪಾತ್ರೆಯೊಂದಕ್ಕೆ ಹಾಕಿಸಣ್ಣ ಉರಿಯಲ್ಲಿ ಕುದಿಸಿ ನಂತರ ಇದಕ್ಕೆ ಬೇಯಿಸಿದ ಸುವರ್ಣಗಡ್ಡೆಗಲನ್ನು ಹಾಕಿ
- ಎಣ್ಣೆಯಲ್ಲಿ ಒಗ್ಗರಣೆ ಕೊಟ್ಟರೆ ರುಚಿಕರವಾದ ಸುವಣ್ಣ ಗಡ್ಡೆ ಮಸಾಲೆ ಸವಿಯಲು ಸಿದ್ಧ.