ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಹಂದಿ ಜ್ವರದಿಂದ ಮತ್ತೆ ೯ ಜನ ಸಾವು; ಸಾವಿನ ಸಂಖ್ಯೆ ೨೦೪೪ಕ್ಕೆ ಏರಿಕೆ

ಎಚ್೧ಎನ್೧ ವೈರಸ್ ಸೋಂಕು ತಗಲಿರುವ ಜನರ ಸಂಖ್ಯೆ ದೇಶದಲ್ಲಿ ಸುಮಾರು ೩೪೦೦೦ ಮುಟ್ಟಿದ್ದು, ಈಗ ೯ ಜನ ಮತ್ತೆ ಮೃತಪಟ್ಟಿರುವುದರಿಂದ

ನವದೆಹಲಿ: ಎಚ್೧ಎನ್೧ ವೈರಸ್ ಸೋಂಕು ತಗಲಿರುವ ಜನರ ಸಂಖ್ಯೆ ದೇಶದಲ್ಲಿ ಸುಮಾರು ೩೪೦೦೦ ಮುಟ್ಟಿದ್ದು, ಈಗ ೯ ಜನ ಮತ್ತೆ ಮೃತಪಟ್ಟಿರುವುದರಿಂದ ಸಾವಿನ ಸಂಖ್ಯೆ ೨೦೪೪ಕ್ಕೆ ಏರಿದೆ. ಮಾರ್ಚ್ ೨೯ರವರೆಗೆ ೩೩೮೭೭ ಜನರಿಗೆ ಸೋಂಕು ತಗಲಿದ್ದು, ೨೦೪೪ ಜನ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಅತಿ ಹೆಚ್ಚು ಸೋಂಕು ತಗುಲಿದ ರಾಜ್ಯ ಗುಜರಾತ್ ಆಗಿದ್ದು, ಇಲ್ಲಿಯವರೆಗೂ ೪೩೦ ಸಾವು ದಾಖಲಾಗಿದೆ. ಇಲ್ಲಿಯವರೆಗೂ ಜನವರಿಯಿಂದ ಗುಜರಾತಿನಲ್ಲಿ ೬೫೦೭ ಜನಕ್ಕೆ ಸೋಂಕು ತಗಲಿದೆ. ರಾಜಸ್ಥಾನದಲ್ಲಿ ಈ ರೋಗ ೪೧೭ ಜನರನ್ನು ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ ೩೯೭, ಮಧ್ಯಪ್ರದೇಶದಲ್ಲಿ ೨೯೯, ಕರ್ನಾಟಕದಲ್ಲಿ ೮೨, ತೆಲಂಗಾಣದಲ್ಲಿ ೭೬, ಪಂಜಾಬ್ ನಲ್ಲಿ ೫೩, ಹರ್ಯಾಣದಲ್ಲಿ ೫೧, ಜಮ್ಮು ಕಾಶ್ಮೀರದಲ್ಲಿ ೧೮, ಉತ್ತರಾಖಂಡದಲ್ಲಿ ೧೨, ಪಶ್ಚಿಮ ಬಂಗಾಳದಲ್ಲಿ ೨೫, ಉತ್ತರಪ್ರದೇಶದಲ್ಲಿ ೩೮, ದೆಹಲಿಯಲ್ಲಿ ೧೨, ಕೇರಳದಲ್ಲಿ ೧೪, ಆಂಧ್ರಪ್ರದೇಶದಲ್ಲಿ ೨೨, ಚತ್ತೀಸ್ ಘರ್ ನಲ್ಲಿ ೨೨ ಮತ್ತು ಹಿಮಾಚಲ ಪ್ರದೇಶದಲ್ಲಿ ೨೧ ಜನ ಹಂದಿಜ್ವರದಿಂದ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT