ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

'ಕೊಕೈನ್'ಗೆ ವ್ಯಸನಿಗಳಾಗುವುದು ಏಕೆ?

ಒಮ್ಮೆ ಕೊಕೈನ್ ಡ್ರಗ್ ಸೇವಿಸಿದರೆ ಅದಕ್ಕೆ ದಾಸರಾಗಿ ಮತ್ತೆ ಮತ್ತೆ ಸೇವಿಸುವುದೇಕೆ ಎಂದು ಸಂಶೋಧಕರ ತಂಡ ಪತ್ತೆ ಹಚ್ಚಲು ಪ್ರಯತ್ನಿಸಿದೆ.

ವಾಷಿಂಗ್ಟನ್: ಒಮ್ಮೆ ಕೊಕೈನ್ ಡ್ರಗ್ ಸೇವಿಸಿದರೆ ಅದಕ್ಕೆ ದಾಸರಾಗಿ ಮತ್ತೆ ಮತ್ತೆ ಸೇವಿಸುವುದೇಕೆ ಎಂದು ಸಂಶೋಧಕರ ತಂಡ ಪತ್ತೆ ಹಚ್ಚಲು ಪ್ರಯತ್ನಿಸಿದೆ. 
"ಕೊಕೈನ್ ದೇಹದ-ಮೆದುಳಿದ ಡೋಪಮೈನ್ ವ್ಯವಸ್ಥೆ ಮತ್ತು ಡೋಪಮೈನ್ ರವಾನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ವರ್ಷಗಳಿಂದ ತಿಳಿದಿದ್ದಾರೆ, ಆದುದರಿಂದ ಇದು ಹೇಗೆ ಕೊಕೈನ್ ನ ಪರಿಣಾಮಕ್ಕೆ ಸಹನೆಯನ್ನು ಬೆಳೆಸಿಕೊಳ್ಳುತ್ತದೆ ಎಂದು ತಿಳಿಯಲು ಅಧ್ಯಯನ ನಡೆಸಿದೆವು " ಎಂದು ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ ನ ಹಿರಿಯ ಸಂಶೋಧಕ ಸಾರಾ ಆರ್ ಜೋನ್ಸ್ ಹೇಳಿದ್ದಾರೆ. 
"ಸದ್ಯಕ್ಕೆ ಕೊಕೈನ್ ವ್ಯಸನ ಬಿಡಿಸಲು ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ ಆದುದರಿಂದ ಹೊಸ ಚಿಕಿತ್ಸೆಯ ಸಂಶೋಧನೆಗೆ ಈ ಡ್ರಗ್ ಬೀರುವ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ" ಎಂದು ಅವರು ತಿಳಿಸಿದ್ದಾರೆ.
ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸಿರುವ ಸಂಶೋಧಕರು, ಇಲಿಗಳಿಗೆ ಆರು ಘಂಟೆಗಳಿಗೊಮ್ಮೆ ಕೊಕೈನ್ ನೀಡಿದ್ದಾರೆ. ಕೆಲವು ದಿನಗಳ ನಂತರ ಆದರೆ ಈ ಆರು ಘಂಟೆಯ ಅವಧಿ ಇಲಿಗಳಲ್ಲಿ ಅನಿಯಂತ್ರಿತ ವರ್ತನೆ, ಅತಿಯಾಗಿ ಆಹಾರ ಸೇವನೆ ಮಾಡುವಂತೆ ಮಾಡಿದೆ. 
ಐದು ದಿನದ ಈ ಪ್ರಯೋಗದ ನಂತರ 14 ರಿಂದ 60 ದಿನಗಳ ವರೆಗೆ ಈ ಇಲಿಗಳಿಗೆ ಕೊಕೈನ್ ನೀಡಲಾಗಿಲ್ಲ. ಈ ಅವಧಿಯ ನಂತರ ಡೋಪಮೈನ್ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ಆದರೆ ನಂತರ ಒಮ್ಮೆ ಕೊಕೈನ್ ಡೋಸ್ ನೀಡಿದಾಗ ಈ ಇಲಿಗಳು ದೀರ್ಘಾವಧಿ ಕೊಕೈನ್ ಸೇವನೆಯಿಂದ ಉಂಟಾಗಿದ್ದ ಮೆದುಳಿನ ಡೋಪಮೈನ್ ಸ್ಥಿತಿಗೆ ಬಂದಿವೆ. 
"60 ದಿನಗಳ ವ್ಯರ್ಜನೆಯ ನಂತರವೂ (ಮನುಷ್ಯರಿಗೆ ಇದು ನಾಲ್ಕು ವರ್ಷಗಳ ಕಾಲಕ್ಕೆ ಸಮ) ಒಂದು ಕೊಕೈನ್ ಡೋಸ್ ಇಲಿಗಳ ಡೋಪಮೈನ್ ವ್ಯವಸ್ಥೆ ಮತ್ತು ಸಹನೆಯ ಮಟ್ಟವನ್ನು ನಿರಂತರವಾಗಿ ಡ್ರಗ್ ಸೇವಿಸುತ್ತಿದ್ದ ಸ್ಥಿತಿಗೆ ಮರಳಿಸಿವೆ ಮತ್ತು ಅನಿಯಂತ್ರಿತ ಹಾಗು ಅತಿಯಾದ ಆಹಾರ ಸೇವನೆಯತ್ತ ಮರಳಿಸಿವೆ" ಎಂದು ಜೋನ್ಸ್ ಹೇಳಿದ್ದು ಇದು ವ್ಯಸನದ ಅತ್ಯುಗ್ರ ಚಕ್ರ ಎನ್ನುತ್ತಾರೆ. 
ಇದಕ್ಕೆ ಚಿಕಿತ್ಸೆಯಾಗಿ ಆಂಫೆಟಮೈನ್ ತರಹದ ಡ್ರಗ್ ಗಳನ್ನು ನೀಡುವ ಪ್ರಯೋಗಗಳು ಪ್ರಗತಿಯಲ್ಲಿವೆ ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT