ಸಾಂದರ್ಭಿಕ ಚಿತ್ರ 
ಆರೋಗ್ಯ

ಅಸಮರ್ಪಕ ಸ್ತನ್ಯಪಾನದಿಂದ ಅತಿ ಹೆಚ್ಚು ಶಿಶುಗಳು ಮರಣ ಹೊಂದುವ ರಾಷ್ಟ್ರಗಳಲ್ಲಿ ಭಾರತವೂ ಒಂದು!

ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ಅತ್ಯಂತ ಅವಶ್ಯಕ. ಮೊದಲ ಆರು ತಿಂಗಳು ಮಗುವಿನ ಆರೋಗ್ಯಕರ ...

ನವದೆಹಲಿ: ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ಅತ್ಯಂತ ಅವಶ್ಯಕ. ಹುಟ್ಟಿದ ಮೊದಲ ಆರು ತಿಂಗಳು ತಾಯಿಯ ಹಾಲು ಕಾಲಕಾಲಕ್ಕೆ ಕಡ್ಡಾಯವಾಗಿ ಶಿಶುಗಳಿಗೆ ಸಿಗಬೇಕಾಗುತ್ತದೆ.
ಪೋಷಕಾಂಶಗಳು ಮತ್ತು ಪ್ರತಿಕಾಯಗಳಿಂದ ತುಂಬಿರುವ ತಾಯಿಯ ಎದೆಹಾಲು ನೀಡಿದರೆ ಕೇವಲ ಮಗುವಿಗೆ ಮಾತ್ರವಲ್ಲದೆ ತಾಯಿಯ ಆರೋಗ್ಯ ದೃಷ್ಟಿಯಿಂದಲೂ ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಹೇಳುತ್ತದೆ.
ಆದರೆ ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಚೀನಾ, ಭಾರತ, ನೈಜೀರಿಯಾ, ಮೆಕ್ಸಿಕೊ ಮತ್ತು ಇಂಡೊನೇಷಿಯಾಗಳಲ್ಲಿ ಪ್ರತಿವರ್ಷ ತಾಯಿಯ ಎದೆಹಾಲು ಸರಿಯಾಗಿ ಸಿಗದೆ 2,36,000ಕ್ಕೂ ಅಧಿಕ ಶಿಶುಗಳು ಸಾಯುತ್ತಿದ್ದಾರಂತೆ. 
ಭಾರತದಲ್ಲಿ ಪ್ರತಿವರ್ಷ ಸುಮಾರು 1 ಲಕ್ಷ ಶಿಶುಗಳು ಸಾಯುತ್ತಿದ್ದಾರೆ. ತಾಯಿಯ ಎದೆಹಾಲು ಸರಿಯಾದ ಪ್ರಮಾಣದಲ್ಲಿ ಸಿಕ್ಕಿದರೆ ಶಿಶಿಗಳು ಸಾಯುವುದನ್ನು ತಡೆಗಟ್ಟಬಹುದು ಎನ್ನುತ್ತದೆ ವಿಶ್ವಸಂಸ್ಥೆ ವರದಿ. ಮರಣ ಮತ್ತು ಇತರ ನಷ್ಟಗಳಿಂದ ಅಸಮರ್ಪಕ ಹಾಲುಣಿಸುವಿಕೆಯ ಕಾರಣದಿಂದಾಗಿ ದೇಶದ ಆರ್ಥಿಕತೆ 14 ಬಿಲಿಯನ್ ಡಾಲರ್ ಗಳಷ್ಟು ವೆಚ್ಚವಾಗಬಹುದು ಎನ್ನುತ್ತದೆ ವರದಿ.
ವಿಶ್ವಸಂಸ್ಥೆ ಮಕ್ಕಳ ನಿಧಿ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ತಯಾರಿಸಿದ ಹೊಸ ವರದಿ ಗ್ಲೋಬಲ್ ಬ್ರೆಸ್ಟ್ ಫೀಡಿಂಗ್ ಸ್ಕೋರ್ ಕಾರ್ಡ್ ಪ್ರಕಾರ, ತಾಯಿಯ ಎದೆಹಾಲು ಶಿಶುಗಳನ್ನು ಅತಿಸಾರ ಮತ್ತು ನ್ಯುಮೋನಿಯಾದಂತಹ ಖಾಯಿಲೆಗಳಿಂದ ಸಹ ತಡೆಯುತ್ತದೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣುವ ಅಂಡಾಶಯ ಮತ್ತು ಸ್ತನ ಕ್ಯಾನ್ಸರ್ ನಂತಹ ರೋಗಗಳನ್ನು ಕೂಡ ಎದೆಹಾಲು ಉಣಿಸುವುದರಿಂದ ತಡೆಗಟ್ಟಬಹುದು.
ತಾಯಿಯ ಎದೆಹಾಲು ಶಿಶುಗಳಿಗೆ ಸರಿಯಾಗಿ ದೊರಕದೆ ಮುಂದಿನ ವರ್ಷಗಳಲ್ಲಿ ಈ ನಾಲ್ಕು  ದೇಶಗಳಲ್ಲಿ ಶಿಶುಗಳ ಮರಣ ಪ್ರಮಾಣ  ಹೆಚ್ಚಾಗಬಹುದು. ಅಲ್ಲದೆ ಮಕ್ಕಳ ಆರೋಗ್ಯ ವೆಚ್ಚಕ್ಕೆ ಪ್ರತಿವರ್ಷ 119 ಶತಕೋಟಿ ಡಾಲರ್ ಬೇಕಾಗಬಹುದು ಎಂದು ವರದಿ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT