ಸಾಂದರ್ಭಿಕ ಚಿತ್ರ 
ಆರೋಗ್ಯ

ಈ ಬಿರು ಬೇಸಿಗೆಯಲ್ಲಿ ತಂಪಾಗಿರಿ; ಇವುಗಳನ್ನು ನಿಮ್ಮ ಪಥ್ಯದಲ್ಲಿ ಯಥೇಚ್ಛವಾಗಿ ಬಳಸಿ

ಧಗೆ ಬಿಸಿಲು ಧುತ್ತೆಂದು ಆಗಮಿಸಿರುವ ಈ ಸಮಯದಲ್ಲಿ ಉಣ್ಣೆ ಬಟ್ಟೆಗಳನ್ನು ಮಡಚಿಟ್ಟು ತಂಪು ಪ್ರದೇಶಗಳಿಗೆ ಹಾತೊರೆಯುತ್ತಿರುವ ನೀವು ಇನ್ನು ಮುಂದೆ ಜೊತೆಗೆ ಒಂದು ಲೋಟ ಹೆಚ್ಚುವರಿ ನಿಂಬೆ ಪಾನಕವನ್ನೋ

ಧಗೆ ಬಿಸಿಲು ಧುತ್ತೆಂದು ಆಗಮಿಸಿರುವ ಈ ಸಮಯದಲ್ಲಿ ಉಣ್ಣೆ ಬಟ್ಟೆಗಳನ್ನು ಮಡಚಿಟ್ಟು ತಂಪು ಪ್ರದೇಶಗಳಿಗೆ ಹಾತೊರೆಯುತ್ತಿರುವ ನೀವು ಇನ್ನು ಮುಂದೆ ಜೊತೆಗೆ ಒಂದು ಲೋಟ ಹೆಚ್ಚುವರಿ ನಿಂಬೆ ಪಾನಕವನ್ನೋ ಅಥವಾ ದೇಹಕ್ಕೆ ತಂಪು ನೀಡುವ ಇನ್ನಿತರ ಹಣ್ಣು-ಹಂಪಲುಗಳನ್ನೋ ಜೊತೆಗಿಟ್ಟುಕೊಳ್ಳಿ. 
ಕೇವಲ ನೀರಷ್ಟೇ ನಿಮ್ಮ ದೇಹವನ್ನು ಈ ಅತಿ ಉಷ್ಣದಿಂದ ದೂರವಿಡುವುದಿಲ್ಲ, ತಂಪಾಗಿಡುವ ಈ ಪದಾರ್ಥಗಳ ಬಗ್ಗೆಯೂ ನಿಮಗೆ ತಿಳಿದಿರಲಿ. 
ಕಲ್ಲಂಗಡಿ: ಬೇಸಿಗೆಯಲ್ಲಿ ಇದೆ ಹಣ್ಣಿನ ರಾಜ. ಈ ಹಣ್ಣಿನಲ್ಲಿ ೯೫% ಭಾಗ ನೀರಿನಿಂದ ಕೂಡಿರುತ್ತದೆ ಎಂದು ನಿಮಗೆ ತಿಳಿದಿದೆಯೇ? 
ಈ ಕೆಂಪಗಿನ ಹಣ್ಣು ನಿಮ್ಮ ದೇಹದ ನೀರಿನ ಅಂಶವನ್ನು ಹೆಚ್ಚಿಸುವುದಲ್ಲದೆ, ಇದರ ಇತರ ಪೋಷಕಾಂಶಗಳು ಮಲಭಾದೆಯನ್ನು ತಡೆಗಟ್ಟಲು ಸಹಕರಿಸುತ್ತವೆ. 
ಎಳನೀರು: ಬೇಸಿಗೆಯಲ್ಲಿ ಎಳನೀರು ಕುಡಿಯುವುದು ಬಹುಷಃ ಅಮೃತಕ್ಕೆ ಸಮ. ಈ ಕಾಲದಲ್ಲಿ ಬೆಲೆ ತುಸು ಹೆಚ್ಚಿದರೂ ದಿನಕ್ಕೊಂದು ಎಳನೀರು ಕುಡಿದು ಹೊಟ್ಟೆ, ದೇಹ ಮತ್ತು ತಲೆಯನ್ನು ತಂಪಾಗಿ ಇಟ್ಟುಕೊಳ್ಳುವುದು ಉತ್ತಮ ಮಾರ್ಗ.
ಸೌತೆಕಾಯಿ: ಈ ತರಕಾರಿಗೆ ಆಂಗ್ಲಭಾಷೆಯಲ್ಲಿ ಒಂದು ನಾಣ್ಣುಡಿಯಿದೆ. ಸೌತೆಯಷ್ಟೇ 'ಕೂಲ್' ವ್ಯಕ್ತಿ ಎಂದು. ಮೊಸರು ಬಜ್ಜಿ, ಕೋಸಂಬರಿ ಮುಂತಾದವಕ್ಕೆ ಅಗತ್ಯವಾದ ಸೌತೆಕಾಯಿಯಲ್ಲಿನ ಅಂಶಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕುವುದಕ್ಕೂ ಸಹಕಾರಿ. ಇದು ಜೀರ್ಣಕ್ಕೂ ಸಹಕರಿಸಿ ಬಾಯಾರಿಕೆಯನ್ನು ತಣಿಸುತ್ತದೆ. 
ಪುದಿನ: ಯಾವುದೇ ಡೆಸರ್ಟ್ ಖಾದ್ಯ ಪುದಿನ ಇಲ್ಲದೆ ಅಪೂರ್ಣ. ಘಮ ಘಮಿಸುವ ವಾಸನೆಗೂ ಸೈ ಆರೋಗ್ಯಕ್ಕೂ. ಇದರ ತಂಪಾದ ತಾಜಾ ಘಮಲು ಬಾಯಿಯಲ್ಲಿ ಕೆಲವು ಎಂಜೈಮ್ ಗಳ ಉತ್ಪಾದನೆಗೆ ಸಹಕರಿಸಿ ಜೀರ್ಣಕ್ಕೆ ಸಹಕರಿಸುತ್ತದೆ. ಇದು ವಾಂತಿ ಮತ್ತು ತಲೆನೋವು ತಡೆಗೂ ಪರಿಣಾಮಕಾರಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT