ಸಾಂದರ್ಭಿಕ ಚಿತ್ರ  
ಆರೋಗ್ಯ

ಕ್ರಾಫ್ಟ್ ಬಿಯರ್ ಕೂಡ ಯಕೃತ್ತು ಹಾನಿ ಮಾಡಬಹುದು: ವೈದ್ಯರು

ನಿರಂತರವಾಗಿ ಕ್ರಾಫ್ಟ್ ಬಿಯರ್ ವಿಸುವುದರಿಂದ ಯಕೃತ್ತಿನ ಪುನರುತ್ಪಾದನೆಯ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು, ಕಾಲಾನಂತರದಲ್ಲಿ ಹಾನಿಯುಂಟಾಗಬಹುದು. ಕೊಬ್ಬಿನ ಬದಲಾವಣೆಗಳಿಂದ ಸಿರೋಸಿಸ್‌ನಂತಹ ಬದಲಾಯಿಸಲಾಗದ ಸ್ಥಿತಿಗಳಿಗೆ ಬದಲಾಗಬಹುದು.

ಬೆಂಗಳೂರು: ಸಾಮಾನ್ಯ ಆಲ್ಕೋಹಾಲ್‌ ಗಿಂತ ಕ್ರಾಫ್ಟ್ ಬಿಯರ್ ನ್ನು ಸಾಮಾನ್ಯವಾಗಿ ಪ್ರೀಮಿಯಂ ಮತ್ತು ನೈಸರ್ಗಿಕ ಪರ್ಯಾಯವೆಂದು ಪರಿಗಣಿಸಲಾಗುತ್ತದೆಯಾದರೂ, ಇಂದು ವಿಶ್ವ ಯಕೃತ್ತಿನ ದಿನ (ಏಪ್ರಿಲ್ 19) ಕ್ಕೆ ಮುಂಚಿತವಾಗಿ, ವೈದ್ಯರು ಯಕೃತ್ತಿನ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಅದರ ನೈಸರ್ಗಿಕ ಪದಾರ್ಥಗಳ ಹೊರತಾಗಿಯೂ, ಕ್ರಾಫ್ಟ್ ಬಿಯರ್ ಇನ್ನೂ ಆಲ್ಕೊಹಾಲ್ ಯುಕ್ತ ಪಾನೀಯವಾಗಿದ್ದು, ಯಕೃತ್ತಿನ ಮೇಲೆ ಪರಿಣಾಮಗಳನ್ನು ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ, ಯಕೃತ್ತು ಸ್ವಯಂ-ದುರಸ್ತಿ ಮಾಡುವ ಸಾಮರ್ಥ್ಯವಿರುವ ಕೆಲವೇ ಅಂಗಗಳಲ್ಲಿ ಒಂದಾಗಿದೆ, ಆದರೆ ಆಲ್ಕೋಹಾಲ್ ಅದರ ಪುನರುತ್ಪಾದಕ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ.

ನಿರಂತರವಾಗಿ ಕ್ರಾಫ್ಟ್ ಬಿಯರ್ ವಿಸುವುದರಿಂದ ಯಕೃತ್ತಿನ ಪುನರುತ್ಪಾದನೆಯ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು, ಕಾಲಾನಂತರದಲ್ಲಿ ಹಾನಿಯುಂಟಾಗಬಹುದು. ಕೊಬ್ಬಿನ ಬದಲಾವಣೆಗಳಿಂದ ಸಿರೋಸಿಸ್‌ನಂತಹ ಬದಲಾಯಿಸಲಾಗದ ಸ್ಥಿತಿಗಳಿಗೆ ಬದಲಾಗಬಹುದು.

ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಜೀರ್ಣಾಂಗ (ಜಿಐ) ಮತ್ತು ಹೆಪಟೋಪ್ಯಾಂಕ್ರಿಯಾಟೋಬಿಲಿಯರಿ (ಎಚ್‌ಪಿಬಿ) ಮತ್ತು ಬಹು-ಅಂಗ ಕಸಿ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಮತ್ತು ಹಿರಿಯ ಸಲಹೆಗಾರ ಡಾ. ಸುರೇಶ್ ರಾಘವಯ್ಯ, ಕ್ರಾಫ್ಟ್ ಬಿಯರ್ ನ್ನು ಹೆಚ್ಚಾಗಿ ಪ್ರೀಮಿಯಂ ಅಥವಾ ಸುರಕ್ಷಿತ ಪರ್ಯಾಯವೆಂದು ಗ್ರಹಿಸಲಾಗಿದ್ದರೂ, ನಿರಂತರ ಸೇವನೆ ಕಾಲಾನಂತರದಲ್ಲಿ ಯಕೃತ್ತಿನ ಮೇಲೆ ಒತ್ತಡವನ್ನುಂಟುಮಾಡಬಹುದು, ಇದು ಕೊಬ್ಬು ಶೇಖರಣೆ, ಉರಿಯೂತ ಮತ್ತು ಕೆಲವು ಸಂದರ್ಭಗಳಲ್ಲಿ, ಆಲ್ಕೊಹಾಲ್ ಯುಕ್ತ ಯಕೃತ್ತಿನ ಕಾಯಿಲೆಗೆ ಕಾರಣವಾಗಬಹುದು ಎನ್ನುತ್ತಾರೆ.

ಅತಿಯಾದ ಮದ್ಯಪಾನಕ್ಕಿಂತ ಭಿನ್ನವಾಗಿ, ಮಧ್ಯಮ ಆದರೆ ನಿಯಮಿತ ಸೇವನೆಯ ಈ ಮಾದರಿಯು ಹಾನಿ ತೀವ್ರವಾಗುವವರೆಗೆ ಗಮನಕ್ಕೆ ಬರುವುದಿಲ್ಲ. ನಿಯಮಿತವಾಗಿ ಸೇವಿಸಿದಾಗ ಬಿಯರ್ ಹಾರ್ಡ್ ಲಿಕ್ಕರ್ ನಷ್ಟೇ ಹಾನಿಕರವಾಗಿದೆ.

ಅನೇಕ ಕ್ರಾಫ್ಟ್ ಬಿಯರ್‌ಗಳು ವಾಣಿಜ್ಯ ಲಾಗರ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ (ABV) ನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಪಬ್ ಗಳಲ್ಲಿ ಸೇವಿಸುವ ಹೆಚ್ಚಿನ ಕೊಬ್ಬಿನ ಆಹಾರಗಳೊಂದಿಗೆ ಸಂಯೋಜಿಸಿದಾಗ, ಯಕೃತ್ತು ಹೆಚ್ಚುವರಿ ಒತ್ತಡವನ್ನು ಎದುರಿಸುತ್ತದೆ ಎಂದು ಡಾ. ರಾಘವಯ್ಯ ಹೇಳುತ್ತಾರೆ.

ಕೆಲವು ಬಿಯರ್ ಗಳನ್ನು ಕುಡಿದ ನಂತರ ಅನೇಕ ಜನರು ಪ್ಯಾರಸಿಟಮಾಲ್‌ನಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ, ಈ ಸಂಯೋಜನೆಯು ಯಕೃತ್ತಿನ ವಿಷತ್ವವನ್ನು ಹೆಚ್ಚಿಸುತ್ತದೆ. ಆಲ್ಕೋಹಾಲ್ ದೇಹದಿಂದ ಸಂಸ್ಕರಿಸಲ್ಪಡುತ್ತಿರುವಾಗ ತೆಗೆದುಕೊಳ್ಳುವ ಚಿಕಿತ್ಸಕ ಪ್ರಮಾಣಗಳು ಸಹ ಯಕೃತ್ತಿನ ಕಿಣ್ವಗಳನ್ನು ಹೆಚ್ಚಿಸಬಹುದು ಮತ್ತು ದೀರ್ಘಕಾಲೀನ ಹಾನಿಯನ್ನುಂಟುಮಾಡಬಹುದು ಎಂದು ಏಸ್ಟರ್ ಸಿಎಂಐ ಆಸ್ಪತ್ರೆಯ ಡಾ ಸೋನಲ್ ಅಸ್ತನ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT