ಸಾಂದರ್ಭಿಕ ಚಿತ್ರ 
ರಾಜ್ಯ

80 ವರ್ಷದ ಮಾಜಿ ಶಾಸಕರಿಗೆ 9 ವರ್ಷದ ಪುತ್ರ; ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ!

ಜನಪ್ರತಿನಿಧಿ ಸೋಗಿನಲ್ಲಿರುವ ಮಾಜಿ ಹಿರಿಯ ಶಾಸಕರೊಬ್ಬರು ಸರ್ಕಾರದ ಸವಲತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು: ಜನಪ್ರತಿನಿಧಿ ಸೋಗಿನಲ್ಲಿರುವ ಮಾಜಿ ಹಿರಿಯ ಶಾಸಕರೊಬ್ಬರು ಸರ್ಕಾರದ ಸವಲತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

ಸರ್ಕಾರದ ಹಣ ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದ್ದು, 80 ವರ್ಷದ ಮಾಜಿ ಶಾಸಕರೊಬ್ಬರು ಸರ್ಕಾರ ನೀಡುತ್ತಿರುವ ಸವಲತ್ತು ಪಡೆಯಲು ಇಲ್ಲದ ಪುತ್ರನನ್ನು ಹುಟ್ಟುಹಾಕಿ, ಆತ ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ಸರ್ಕಾರದಿಂದ ಹಣ ಪಡೆಯಲು ಯತ್ನಿಸಿದ್ದಾರೆ. ಆದರೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದಾಗ ಮಾಜಿ ಶಾಸಕರ ಕೃತ್ಯ ಬಯಲಾಗಿದೆ.

ಏನಿದು ಘಟನೆ?
ಮಾಜಿ ಶಾಸಕರಿಗೆ ಮತ್ತು ಸಚಿವರಿಗೆ ರಾಜ್ಯ ಸರ್ಕಾರ ಒಂದಷ್ಟು ಸವಲತ್ತುಗಳನ್ನು ನೀಡುತ್ತಿದ್ದು, ಈ ಪೈಕಿ ಮಾಜಿ ಶಾಸಕರ ಕುಟುಂಬಸ್ಥರಿಗೆ ಅನಾರೋಗ್ಯ ವಿಮೆ ಕೂಡ ನೀಡಿದೆ. ಅದರಂತೆ ಸುಮಾರು 80 ವರ್ಷದ ಹಿರಿಯ ಮಾಜಿ ಶಾಸಕರೊಬ್ಬರು ಸರ್ಕಾರದ ಈ ಸವಲತ್ತು ಪಡೆಯಲು ಅದಿತ್ಯಾ ಎಂಬ ಹೆಸರಿನ ಇಲ್ಲದ ಪುತ್ರನನ್ನು ಹುಟ್ಟುಹಾಕಿ ಆತ ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ್ದಾನೆ ಎಂದು ಸುಳ್ಳುದಾಖಲೆ ಸೃಷ್ಟಿಸಿ ಅಧಿಕಾರಿಗಳಿಗೆ ನೀಡಿದ್ದಾರೆ. ಮಾಜಿ ಶಾಸಕರು ನೀಡಿದ ದಾಖಲೆಗಳ ಪ್ರಕಾರ ಅವರ ಪುತ್ರನ ವಯಸ್ಸು 9 ವರ್ಷವಾಗಿದ್ದು, ಅವರ ವಯಸ್ಸು 80 ವರ್ಷವಂತೆ. ಹಾಗಾದರೆ ಅವರ 71ನೇ ವಯಸ್ಸಿನಲ್ಲಿ ಪುತ್ರ ಜನಿಸಿದನೇ ಎಂಬ ಅನುಮಾನ ಅಧಿಕಾರಿಗಳಿಗೆ ಹುಟ್ಟಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿದಾಗ ಮಾಜಿ ಶಾಸಕರ ರಹಸ್ಯ ಬಯಲಾಗಿದೆ. ಅವರು ನೀಡಿದ್ದ ವಿಳಾಸ ಸೇರಿದಂತೆ ಎಲ್ಲ ದಾಖಲೆಗಳು ನಕಲಿ ಎಂದು ಸಾಬೀತಾಗಿದೆ.

ಹೀಗಾಗಿ ಪ್ರಸ್ತುತ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ಹಿಂದೆಯಷ್ಟೇ ಸ್ಪೀಕರ್ ಕೆಬಿ ಕೋಳಿವಾಡ ಅವರು ಮಾಜಿ ಶಾಸಕರು ಹಾಗೂ ಸಚಿವರಿಗೆ ಸೆಕ್ಷನ್ 12 (3)ರ ಅಡಿಯಲ್ಲಿ ನೀಡಲಾಗುತ್ತಿರುವ ಸವಲತ್ತುಗಳ ಕುರಿತ ಕಾನೂನನ್ನು ಕಠಿಣಗೊಳಿಸಬೇಕು ಎಂದು ಹೇಳಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಕೂಡ ಬರೆದಿದ್ದು, ಸವಲತ್ತು ದುರ್ಬಳಕೆ ಕುರಿತು ಎಚ್ಚರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಈ ಪ್ರಕರಣ ಬಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿಲ್ಲ: ದೆಹಲಿಯಲ್ಲಿ ಡಿ.ಕೆ ಶಿವಕುಮಾರ್

Video: 'ಭಾರತ ಛಿದ್ರ ಛಿದ್ರ ಆದ್ರೇನೆ ಬಾಂಗ್ಲಾದೇಶದಲ್ಲಿ ಶಾಂತಿ'; ಮಾಜಿ ಸೇನಾ ಮುಖ್ಯಸ್ಥನ ಪ್ರಚೋದನಾ ಹೇಳಿಕೆ

ಸಂಚಾರ್ ಸಾಥಿ ಆ್ಯಪ್ ನಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ; Video

ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಪ್ರಜೆಗಳ ಬಂಧನ; 29 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ

Anantapur: ಶಾಸಕನ ರಾಸಲೀಲೆ Video ವೈರಲ್; ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

SCROLL FOR NEXT