ಹತ್ಯೆಯಾದ ಯೋಧ ಈರಣ್ಣ ಇಂಡಿ 
ರಾಜ್ಯ

ತಂದೆಯಿಂದಲೇ ಯೋಧನ ಬರ್ಬರ ಹತ್ಯೆ!

ಯೋಧನೊಬ್ಬನನ್ನು ಆತನ ತಂದೆಯೇ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಮಂಗಳವಾರ ಬೈಲಹೊಂಗಲದ ನಯಾ ನಗರದಲ್ಲಿ ನಡೆದಿದೆ...

ಬೆಳಗಾವಿ: ಯೋಧನೊಬ್ಬನನ್ನು ಆತನ ತಂದೆಯೇ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಮಂಗಳವಾರ ಬೈಲಹೊಂಗಲದ ನಯಾ ನಗರದಲ್ಲಿ ನಡೆದಿದೆ.

ಈರಣ್ಣ ಇಂಡಿ (21) ಹತ್ಯೆಯಾದ ಯೋಧ. ಗುಂಡಿನ ದಾಳಿ ವೇಳೆ ಈರಣ್ಣ ಅವರ ತಾಯಿ ಅನುಸೂಯಾ ಹಾಗೂ ಮಗಳು ಪ್ರೀತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಠಲ ಇಂಡಿ (68)  ಗುಂಡು ಹಾರಿಸಿ ಹತ್ಯೆ ಮಾಡಿದ ತಂದೆಯಾಗಿದ್ದಾರೆ. ಹತ್ಯೆಯಾದ ದಿನದಂದು ಈರಣ್ಣ ಇಂಡಿ ಹಾಗೂ ವಿಠಲ ಇಂಡಿ ನಡುವೆ ಹಣದ ವಿಚಾರಕ್ಕೆ ಜಗಳವಾಗಿದೆ. ಇಬ್ಬರ ನಡುವೆ ತೀವ್ರ ವಾಗ್ವಾದಗಳು ನಡೆದಿವೆ. ಈ ವೇಳೆ ಕೆಂಡಾಮಂಡಲವಾದ ವಿಠಲ ಇಂಡಿಯವರು ರಿವಾಲ್ವರ್ ನಿಂದ ಐದು ಗುಂಡುಗಳನ್ನು ಈರಣ್ಣ ಇಂಡಿ ಅವರ ಮೇಲೆ ಹಾರಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋಗಿದ್ದ ತಾಯಿ ಹಾಗೂ ಮಗಳಿಗೂ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆ ಬಳಿಕ ವಿಠಲ ಇಂಡಿಯವರು ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಘಟನೆ ಕುರಿತಂತೆ ಹೇಳಿಕೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರು,  ವಿಠಲ ಇಂಡಿಯವರು ಇರುವ ಸ್ಥಳವನ್ನು ಈಗಾಗಲೇ ಕಂಡು ಹಿಡಿಯಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾದನಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

48 ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT