ಸಿ. ಮಹಾದೇಶ್ 
ರಾಜ್ಯ

ಮೈಸೂರು ಪಾಲಿಕೆ ಜೆಡಿಎಸ್ ಕಾರ್ಪೋರೇಟರ್ ಗೆ ಜೀವಾವಧಿ ಶಿಕ್ಷೆ

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಪೋರೇಟರ್ ಸಿ. ಮಹಾದೇಶ್ (ಅವ್ವ ಮಾದೇಶ) ಸೇರಿದಂತೆ ಎಂಟು ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ....

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊರವಲಯದಲ್ಲಿ 8 ವರ್ಷದ ಹಿಂದೆ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಪೋರೇಟರ್ ಸಿ. ಮಹಾದೇಶ್ (ಅವ್ವ ಮಾದೇಶ) ಸೇರಿದಂತೆ ಎಂಟು ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿ. ಮಹಾದೇಶ್, ಅವರ ಸಹೋದರ ಸಿ. ಮಂಜುನಾಥ್, ಅಕ್ಕನ ಮಗ ಅಂಬರೀಷ್, ಶಿವಕುಮಾರ್, ಪಾಲಹಳ್ಳಿ ಸತೀಶ, ಡಿಚ್ಚಿ ರವಿ, ಚಂದು, ಕಾರ್ತಿಕ್ ಜೀವಾವಧಿ ಶಿಕ್ಷೆಗೆ ಗುರಿಯಾದವರು. ಸೂಕ್ತ ಸಾಕ್ಷ್ಯ ಸಿಗದ ಕಾರಣ ಶಿವ ನಿಶ್ಚಿತ್ ಎಂಬಾತನನ್ನು ಖುಲಾಸೆಗೊಳಿಸಲಾಗಿದೆ.

ವಿಜಯನಗರ ಬಡಾವಣೆ ಜಾಗಕ್ಕೆ ಸಂಬಂಧಿಸಿದಂತೆ ಮಹಾದೇಶ್ ಹಾಗೂ ಗುಂಪೊಂದರ ನಡುವೆ ವಿವಾದ ಉಂಟಾಗಿತ್ತು. ಪಡುವಾರಹಳ್ಳಿ ರಾಜೇಶ್ (ಗಾಂಧಿ) ಎಂಬಾತ ಎದುರಾಳಿ ಗುಂಪನ್ನು ನನ್ನ ಮೇಲೆ ಎತ್ತಿಕಟ್ಟಿ ದಾಳಿ ನಡೆಸಲು ಯತ್ನಿಸುತ್ತಿದ್ದಾನೆ ಎನ್ನುವುದು ಮಹಾದೇಶ್ ಸಿಟ್ಟಿಗೆ ಕಾರಣವಾಗಿತ್ತು. ಸೇಡು ತೀರಿಸಿಕೊಳ್ಳಲು ಮಹಾದೇಶ್ ಗುಂಪು ಕಾಯುತ್ತಿತ್ತು. ಈ ವಿಚಾರ ತಿಳಿದೇ ಪಡುವಾರಹಳ್ಳಿಯ ರಾಜೇಶ್ ಹಾಗೂ ಆತನ ಸ್ನೇಹಿತರಾದ ರಾಮು, ಸುನೀಲ ದಾಳಿಯಿಂದ ತಪ್ಪಿಸಿಕೊಳ್ಳಲು ಹುಣಸೂರಿನಲ್ಲಿ ಅಡಗಿಕೊಂಡಿದ್ದರು.

ಹುಣಸೂರು ಎಪಿಎಂಸಿ ಹಿಂಭಾಗದಲ್ಲಿರುವ ಮುದ್ದಪ್ಪ ಎನ್ನುವವರ ತೋಟದ ಮನೆಯಲ್ಲಿ ಆಶ್ರಯ ಪಡೆದಿದ್ದ ನಾಲ್ವರ ಮೇಲೆ ದಾಳಿ ಮಾಡಲು ಮಹಾದೇಶ್ ಹಾಗೂ 8 ಮಂದಿ 2008ರ ಮೇ 14ರ ರಾತ್ರಿ ಹೋಗಿತ್ತು. ಬಾಗಿಲನ್ನು ಮುರಿದು ರಾಜೇಶ ಹಾಗೂ ರಾಮುವನ್ನು ಮಚ್ಚುಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪೊಲೀಸರು ಮಹಾದೇಶ್ ಮತ್ತು ಆತನ ಸಹಚರರನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಮಹಾದೇಶ್ 3 ಲಕ್ಷ ರೂ. ಹಾಗೂ ಉಳಿದ ಆರೋಪಿಗಳು ತಲಾ ಒಂದು ಲಕ್ಷ ರೂ. ದಂಡ ಪಾವತಿಸಬೇಕು. ಇದರಲ್ಲಿ ಕೊಲೆಯಾದ ರಾಜೇಶ್ ಹಾಗೂ ರಾಮು ಕುಟುಂಬಕ್ಕೆ ತಲಾ 3 ಲಕ್ಷ ರೂ. ನೀಡಿ ಉಳಿಕೆ ಮೊತ್ತ ಸರಕಾರಕ್ಕೆ ಜಮೆ ಮಾಡಬೇಕು ಎಂಬುದಾಗಿ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT