ರಾಜ್ಯ

ಹೈದರಾಬಾದ್-ಕರ್ನಾಟಕ ಭಾಗದ ಯುವಕರಿಗೆ 12 ಸಾವಿರ ಉದ್ಯೋಗಾವಕಾಶ ಕರ್ನಾಟಕದ ಇ-ಫಾರ್ಮ್ ದೇಶಕ್ಕೆ ಮಾದರಿ: ವಜುಬಾಯಿ ವಾಲಾ

ಹಿಂದುಳಿದ ಹೈದರಾಬಾದ್ -ಕರ್ನಾಟಕ ಭಾಗದ ಯುವಕರಿಗೆ ಈ ವರ್ಷ ನ್ಯಾಯಸಮ್ಮತವಾಗಿ ಸರ್ಕಾರಿ ಉದ್ಯೋಗ ದೊರಕಲಿದೆ. ಸಂವಿಧಾವ ಪರಿಚ್ಛೇದ 371(ಜೆ) ಪ್ರಕಾರ ಹೈದರಾಬಾದ್...

ಬೆಂಗಳೂರು: ಹಿಂದುಳಿದ ಹೈದರಾಬಾದ್ -ಕರ್ನಾಟಕ ಭಾಗದ ಯುವಕರಿಗೆ ಈ ವರ್ಷ ನ್ಯಾಯಸಮ್ಮತವಾಗಿ ಸರ್ಕಾರಿ ಉದ್ಯೋಗ ದೊರಕಲಿದೆ.

ಸಂವಿಧಾವ ಪರಿಚ್ಛೇದ 371(ಜೆ) ಪ್ರಕಾರ ಹೈದರಾಬಾದ್ ಕರ್ನಾಟಕ ಭಾಗದಲ್ಲಿ 12 ಸಾವಿರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತುಂಬಲು ಸರ್ಕಾರ ಮುಂದಾಗಿದೆ. ಖಾಲಿ ಇರುವ 30 ಸಾವಿರ ಹುದ್ದೆಗಳಲ್ಲಿ 9 ಸಾವಿರದ 450 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಈ ಎಲ್ಲಾ ಅಂಕಿಅಂಶಗಳನ್ನು ನಿನ್ನೆ ರಾಜ್ಯಪಾಲ ವಜುಭಾಯಿ ವಾಲಾ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ರಾಜ್ಯಪಾಲರ ಭಾಷಣ ಸಿದ್ಧರಾಮಯ್ಯ ಸರ್ಕಾರದ ವರದಿ ಕಾರ್ಡು ರೀತಿಯಲ್ಲಿ ಇದ್ದಿತ್ತು.

ರಾಜ್ಯದ 157 ಎಪಿಎಂಸಿ ಮಾರುಕಟ್ಟೆಗಳ ಮೂಲಕ ಕೃಷಿ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಗೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ಸಿಕ್ಕಿದ್ದು, ಕರ್ನಾಟಕದ ಮಾದರಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ ಎಂದು ರಾಜ್ಯಪಾಲರು ತಿಳಿಸಿದರು. 31 ಪುಟಗಳ ರಾಜ್ಯಪಾಲರ ಭಾಷಣ ಸುಮಾರು ಎಲ್ಲಾ ವಲಯಗಳ ಬಗ್ಗೆಯೂ ಬೆಳಕು ಚೆಲ್ಲಿತ್ತು. ಇಂಧನ ವಲಯದಲ್ಲಿ, 800 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಯೆರಮರೂಸ್ ಥರ್ಮಲ್ ವಿದ್ಯುತ್ ಘಟಕದ ಮೊದಲ ಘಟಕ ಮತ್ತು 700 ಮೆಗಾವ್ಯಾಟ್ ಸಾಮರ್ಥ್ಯದ ಬಳ್ಳಾರಿ ಥರ್ಮಲ್ ವಿದ್ಯುತ್ ಘಟಕದ ಮೂರನೇ ಘಟಕ ಸದ್ಯದಲ್ಲಿಯೇ ಆರಂಭವಾಗಲಿದೆ.

ಕೈಗಾರಿಕಾ ವಲಯದಲ್ಲಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಬೀದರ್ ನ ಕೊಲ್ಹಾರ್ ಕೈಗಾರಿಕಾ ವಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ದೇವನಹಳ್ಳಿಯ ಅಂತರಿಕ್ಷಯಾನ ಪಾರ್ಕ್ ನಲ್ಲಿ ಅಂತರಿಕ್ಷಯಾನ ಹಾರಾಟ ಸೌಲಭ್ಯ ಸ್ಥಾಪನೆ ಒಳಗೊಂಡಿದೆ. ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಇ-ಕಾರ್ಮಿಕ ಪೋರ್ಟಲ್ ನ್ನು ತರಲಾಗಿದೆ.

ಇತರ ಅನುಮೋದನೆಗಳು:
- ಕಲಬುರ್ಗಿಯ ವೈದ್ಯಕೀಯ ಕಾಲೇಜು ಆವರಣದಲ್ಲಿ ಜಯದೇವ ಹೃದ್ರೋಗ ಘಟಕ ಸ್ಥಾಪನೆಗೆ ಅನುಮೋದನೆ.
- ರಾಜ್ಯದಲ್ಲಿ 145 ಹೊಸ ಕೋರ್ಟ್ ಗಳ ಸ್ಥಾಪನೆ.
-2015-16ರಲ್ಲಿ ಮಾಹಿತಿ ತಂತ್ರಜ್ಞಾನದ ರಫ್ತು 2 ಲಕ್ಷದ 20 ಕೋಟಿಗೆ ಏರಿಕೆ
-ಉದ್ಯಮಿಗಳನ್ನು ಪ್ರೋತ್ಸಾಹಿಸಲು ರಾಜ್ಯಾದ್ಯಂತ ಇರುವ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 9 ಇನ್ಕ್ಯುಬೇಶನ್ ಕೇಂದ್ರಗಳ ಸ್ಥಾಪನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT