ರಾಜ್ಯ

ತುಮಕೂರಿನ ರಂಗಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಸಾವು

Lingaraj Badiger
ತುಮಕೂರು: ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ರಂಗಾಪುರದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಸಾಕ್ಷಪ್ಪ(45), ನವೀನ್(15), ದರ್ಶನ್(13) ಎಂದು ಗುರುತಿಸಲಾಗಿದೆ.
ಬಾಯಾರಿತೆಂದು ಮೃತ ಸಾಕ್ಷಪ್ಪನ ಇಬ್ಬರು ಮಕ್ಕಳು ಹತ್ತಿರದ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿದ್ದರು. ಈ ವೇಳೆ ಮಕ್ಕಳು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ನೀರು ಜಾಸ್ತಿ ಇದ್ದ ಪರಿಣಾಮ ಈಜಾಡಲು ಸಾಧ್ಯವಾಗದೆ ಪರದಾಡುತ್ತಿದ್ದ ಮಕ್ಕಳನ್ನು ರಕ್ಷಿಸಲೆಂದು ಸಾಕ್ಷಪ್ಪ ತಾವೂ ನೀರಿಗಿಳಿದ್ದಾರೆ. ಪರಿಣಾಮ ಮೂವರೂ ಮೃತಪಟ್ಟಿದ್ದಾರೆ.
ಈ ಸಂಬಂಧ ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT