ಡಿವೈಎಸ್ಪಿ ಗಣಪತಿ 
ರಾಜ್ಯ

ಭಯದಿಂದ ಮಡಿಕೇರಿ ಪೊಲೀಸರು ಎಫ್ ಐ ಆರ್ ದಾಖಲಿಸಿಲ್ಲ: ಸಿಐಡಿ ಅಧಿಕಾರಿಗಳು

ಸರ್ಕಾರ ಅಥವಾ ರಾಜಕಾರಣಿಗಳ ಸಿಟ್ಟಿಗೆ ಗುರಿಯಾಗಬಹುದೆಂದು ಹೆದರಿ ಮಡಿಕೇರಿ ಪೊಲೀಸರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ ಐ ಆರ್ ..

ಬೆಂಗಳೂರು: ಸರ್ಕಾರ ಅಥವಾ ರಾಜಕಾರಣಿಗಳ ಸಿಟ್ಟಿಗೆ ಗುರಿಯಾಗಬಹುದೆಂದು ಹೆದರಿ ಮಡಿಕೇರಿ ಪೊಲೀಸರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಿಸಿಲ್ಲ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೊಂಡಿದ್ದರು. ಆದರೆ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದೆ.

ಕೇಸು ದಾಖಲಿಸಿಕೊಂಡರೇ ಹಿರಿಯ ಅಧಿಕಾರಿಗಳ ಕೋಪಕ್ಕೆ ಅಥ್ವಾ ರಾಜಕಾರಣಿಗಳ ಸಿಟ್ಟಿಗೆ ಕಾರಣವಾಗಬಹುದೆಂಬ ಉದ್ದೇಶದಿಂದ ಸ್ಥಳೀಯ ಪೊಲೀಸರು ಎಫ್ ಐಆರ್ ದಾಖಲಿಸಿಲ್ಲ. ಗಣಪತಿ ಸ್ಥಳೀಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿರುವುದರ ಕುರಿತು ಮಡಿಕೇರಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಪ್ರಕರಣದ ತೀವ್ರತೆ ಅರಿತ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮೊದಲು ಅವರಿಗೆ ಮಾಹಿತಿ ನೀಡಿ, ಅವರ ಸೂಚನೆಗಾಗಿ ಕಾಯುತ್ತಿದ್ದರು. ಹಿರಿಯ ಅಧಿಕಾರಿಗಳು ಆದೇಶ ನೀಡಿದ ನಂತರವಷ್ಟೇ ಅವರು ಸಿಲೀಂಗ್ ಫ್ಯಾನ್ ನಿಂದ ಗಣಪತಿ ಅವರ ಮೃತ ದೇಹವನ್ನು ಕೆಳಗಿಳಿಸಿದ್ದು, ಅದುವರೆಗೂ, ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯ ಹೊರಭಾಗದಲ್ಲೇ ಪೊಲೀಸರು ಕಾಯುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗಣಪತಿ ತಂದೆಗೆ ತಮ್ಮ ಪುತ್ರ ಸಾಯುವ ಮುನ್ನ ಖಾಸಗಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆಂದು ತಿಳಿಸಿದಿರಲಿಲ್ಲ. ಸಾವಿಗೂ ಮುನ್ನ ಗಣಪತಿ ತಮ್ಮ ಸಹೋದರ ಹಾಗೂ ರಾಮನಗರ ಡಿವೈಎಸ್ ಪಿ ತಮ್ಮಯ್ಯ ಅವರಿಗೆ ತಾವು ಸಾಯವು ಹೊರಟಿರುವುದಾಗಿ ಮೆಸೇಜ್ ಕಳಿಸಿದ್ದರು, ಆದರೆ ಆ ಕ್ಷಣದಲ್ಲಿ ತಮ್ಮಯ್ಯ ಆ ಮೆಸೇಜ್ ನೋಡಿರಲಿಲ್ಲ. ಅಷ್ಟರಲ್ಲಾಗಲೇ ಗಣಪತಿ ಸಾವನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.

ಸಾವಿಗೂ ಮುನ್ನ ಸ್ಥಳೀಯ ಚಾನೆಲ್ ಗಣಪತಿ  ಅವರ ಸಂದರ್ಶನವನ್ನು ಪ್ರಸಾರ ಮಾಡಿತ್ತು, ಆದರೆ ಯಾರೋಬ್ಬರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಹಾಗೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ತನಿಖೆಯ ವಿಷಯಗಳನ್ನು ಮೌಖಿಕವಾಗಿ ಡಿಜಿಪಿ ಅವರಿಗೆ ತಿಳಿಸಿದ್ದರು. ತನಿಖೆಯ ಯಾವುದೇ ಮಾಹಿತಿಯ ವರದಿಯನ್ನು ಇದುವೆರಗೂ ಯಾರಿಗೂ ನೀಡಿಲ್ಲ. ನ್ಯಾಯಾಧೀಶರು ಕೇಳುವವರೆಗೂ ನಾವು ವರದಿಯನ್ನೂ ಎಲ್ಲಿಯೂ. ಯಾರಿಗೂ ಸಲ್ಲಿಸುವಂತಿಲ್ಲ, ವರದಿಯನ್ನು ಎಲ್ಲಿಯೂ ಬಹಿರಂಗ ಪಡಿಸುವಂತಿಲ್ಲ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT