ಕುಸ್ತಿಪಟು ಅರ್ಜುನ್ 
ರಾಜ್ಯ

ಟರ್ಕಿಯಲ್ಲಿ ಸೇನಾ ದಂಗೆ: ದಾವಣಗೆರೆ ಕುಸ್ತಿಪಟು ಅರ್ಜುನ್ ಸುರಕ್ಷಿತ

ಟರ್ಕಿಯಲ್ಲಿ ಉಂಟಾಗಿರುವ ಸೇನಾ ದಂಗೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಮಧ್ಯೆಯೇ ರಾಜ್ಯದ ಕುಸ್ತಿಪಟುವೊಬ್ಬರು ಟರ್ಕಿಯಲ್ಲಿ ಸಂಕಷ್ಟಕ್ಕೆ...

ದಾವಣಗೆರೆ: ಟರ್ಕಿಯಲ್ಲಿ ಉಂಟಾಗಿರುವ ಸೇನಾ ದಂಗೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಮಧ್ಯೆಯೇ ರಾಜ್ಯದ ಕುಸ್ತಿಪಟುವೊಬ್ಬರು ಟರ್ಕಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಲಾಗುತ್ತಿದ್ದು, ಇದೀಗ ಕುಸ್ತಿಪಟು ಸುರಕ್ಷಿತರಾಗಿರುವುದಾಗಿ ತಿಳಿದುಬಂದಿದೆ.

ಟರ್ಕಿಯಲ್ಲಿ ನಡೆಯದ ಅಥ್ಲೆಟಿಕ್ಸ್ ಕ್ರೀಡೂಕೂಟದ ಅಂಡರ್ 19 ಜ್ಯೂಡೋ ಕುಸ್ತಿ ಸ್ಪರ್ಧೆಯಲ್ಲಿ ಭಾರತದಿಂದ 55 ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕದ ದಾವಣಗೆರೆ ಮೂಲದ ಕುಸ್ತಿಪಟು ಅರ್ಜುನ್ ಮತ್ತು ಬೆಳಗಾವಿಯಿಂದ ಗೀತಾ ಎಂಬ ಇಬ್ಬರು ಕ್ರೀಡಾಪಟುಗಳು ಟರ್ಕಿಗೆ ತೆರಳಿದ್ದರು.

ಕುಸ್ತಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅರ್ಜುನ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಜಾರ್ಜಿಯಾದ ಕುಸ್ತಿಪಟು ವಿರುದ್ಧ ಸೆಣಸಾಡಿದ್ದ ಅರ್ಜುನ್ ಹಲುಕುರ್ಕಿ ಅವರು 8-4 ಪಾಯಿಂಟ್ ಗಳಿಸಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಬೆಳಗಾವಿಯ ಗೀತಾ ಕೂಡ ಕ್ರೀಡಾಕೂಟದಲ್ಲಿ ಭಾಗಿಯಾಗಿ ತಾಯ್ನಾಡಿಗೆ ವಾಪಸ್ಸಾಗುವ ಖುಷಿಯಲ್ಲಿದ್ದರು. ಆದರೆ, ಟರ್ಕಿಯಲ್ಲಿ ಉಂಟಾಗಿರುವ ಸೇನಾ ದಂಗೆ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುವಂತೆ ಮಾಡಿತ್ತು. ಇದರಂತೆ ಕೆಲ ದಿನಗಳ ಹಿಂದೆ ಕ್ರೀಡಾ ನಿಲಯದ ಕುಸ್ತಿ ತರಬೇತುದಾರನಿಗೆ ಕರೆ ಮಾಡಿರುವ ಅರ್ಜುನ್ ಅವರು, ನಾವು ಸುರಕ್ಷಿತರಾಗಿದ್ದೇವೆ. ಅಧಿಕಾರಿಗಳು ನಮಗೆ ರಕ್ಷಣೆ ನೀಡುತ್ತಿದ್ದಾರೆ. ಪ್ರಸ್ತುತ ನಾವು ಟರ್ಕಿಯ ಟ್ರಬ್ಜಾನ್ ವಿಮಾನ ನಿಲ್ದಾಣದ ಬಳಿಯಲ್ಲಿದ್ದೇವೆಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT