ಶಿವಕುಮಾರ ಮತ್ತು ರಾಧಿಕಾ 
ರಾಜ್ಯ

ಮಂಗಳಮುಖಿಯೊಂದಿಗೆ ಯುವಕನ ವಿವಾಹ: ಪೋಷಕರ ಆಕ್ರೋಶ

ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದ್ದು, ವಿವಾಹಕ್ಕೆ ಯುವಕನ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ...

ಕೊಪ್ಪಳ: ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದ್ದು, ವಿವಾಹಕ್ಕೆ ಯುವಕನ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಯಲಬುರ್ಗಾ ತಾಲೂಕಿನ ಗೆದಿಕೇರಿ ತಾಂಡದಾ ಶಿವಕುಮಾರ(20), ಕೊಪ್ಪಳದ ಸದಾಶಿವನಗರ ನಿವಾಸಿಯಾಗಿರುವ ಮಂಗಳಮುಖಿ ರಾಧಿಕಾ(19) ಅವರನ್ನು ವಿವಾಹವಾದ ಯುವಕನಾಗಿದ್ದಾನೆ.

ಇಬ್ಬರ ವಿವಾಹ ನಡೆಯುತ್ತಿದ್ದ ವಿಚಾರ ತಿಳಿದ ಯುವಕನ ಪೋಷಕರು ಪೊಲೀಸರನ್ನು ಕರೆತಂದು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮಂಗಳಮುಖಿಯರು ಹಾಗೂ ಯುವಕನ ಸಂಬಂಧಿಕರ ನಡುವೆ ಸಾಕಷ್ಟು ವಾಗ್ವಾದಗಳು ನಡೆದು ಕೊಪ್ಪಳದಲ್ಲಿ ಕೆಲವು ಗಂಟೆಗಳ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕೊಪ್ಪಳದಲ್ಲಿ ನನ್ನ ತಮ್ಮ ಇರುವುದಾಗಿ ತಿಳಿಯಿತು. ಮಂಗಳಮುಖಿಯರು ನನ್ನ ತಮ್ಮನಿಗೆ ಮೋಸ ಮಾಡಿ ಮದುವೆ ಮಾಡಿಸುತ್ತಿದ್ದಾರೆಂದು ಶಿವಕುಮಾರ್ ಸಹೋದರ ಫಕೀರಪ್ಪ ಅವರು ಹೇಳಿಕೊಂಡಿದ್ದಾರೆ.

ಮಂಗಳಮುಖಿಯರು ನೆಲೆಸಿರುವ ಕೊಪ್ಪಳದ ಬೆಂಕಿ ನಗರದಲ್ಲಿ ಶಿವಕುಮಾರ್ ಸಿಕ್ಕಿದ್ದರು. ಘಟನೆ ನಂತರ ಕೊನೆಗೂ ಶಿವಕುಮಾರ್ ಅವರ ಮನವೊಲಿಸಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು. ಈ ರೀತಿಯ ಘಟನೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶಗಳಿಲ್ಲ. ಪ್ರಕರಣ ಸಂಬಂಧ ಕಾನೂನು ಸಲಹೆ ಪಡೆದುಕೊಂಡ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ರಾಜ್ಯದಲ್ಲಿ 'ಸೀಸನಲ್ ಫ್ಲೂ' ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

video| ಹವಾಮಾನ ಬದಲಾವಣೆ: ಸುಡುವ ಮರಳುಗಾಡಲ್ಲಿ ಕಂಡು ಕೇಳರಿಯದ ಹಿಮಪಾತ!

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!

ಕೋಳಿ ಪಂದ್ಯ ಅಡ್ಡೆ ಮೇಲೆ ಪೊಲೀಸರ ದಾಳಿ: ಪುತ್ತೂರು MLA ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲು!

SCROLL FOR NEXT