ಗಿರೀಶ್ ಮಟ್ಟೆಣ್ಣನವರ್ 
ರಾಜ್ಯ

ಶಾಸಕರ ಭವನದಲ್ಲಿ ಬಾಂಬ್ ಪ್ರಕರಣ: ಗಿರೀಶ್ ಮಟ್ಟೆಣ್ಣನವರ್ ಖುಲಾಸೆ

2003ರ ಶಾಸಕರ ಭವನದಲ್ಲಿ ನೆಲೆಸಿರುವ 'ಭ್ರಷ್ಟ ರಾಜಕಾರಣಿ'ಗಳನ್ನು ಬೆದರಿಸಲು ಬಾಂಬ್‌ ಇಟ್ಟ ಪ್ರಕರಣದ ಪ್ರಮುಖ ಆರೋಪಿ ಗಿರೀಶ್‌ ಮಟ್ಟಣ್ಣನವರ್‌ ಹಾಗೂ...

ಬೆಂಗಳೂರು: 2003ರ ಶಾಸಕರ ಭವನದಲ್ಲಿ ನೆಲೆಸಿರುವ 'ಭ್ರಷ್ಟ ರಾಜಕಾರಣಿ'ಗಳನ್ನು ಬೆದರಿಸಲು ಬಾಂಬ್‌ ಇಟ್ಟ ಪ್ರಕರಣದ ಪ್ರಮುಖ ಆರೋಪಿ ಗಿರೀಶ್‌ ಮಟ್ಟಣ್ಣನವರ್‌ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಸೋಮವಾರ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಸುಮಾರು 13 ವರ್ಷಗಳ ನಂತರ ಇಂದು ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ನಗರದ 66ನೇ ಸಿವಿಲ್ ಹಾಗೂ ಸೆಷೆನ್ಸ್ ಕೋರ್ಟ್, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮೊದಲ ಆರೋಪಿ ಗಿರೀಶ್ ಮಟ್ಟೆಣ್ಣನವರ್ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಶಾಸಕರ ಭವನದಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಹುಸಿ ಬಾಂಬ್ ಕರೆ ಮಾಡಿದ್ದ ಘಟನೆಯಲ್ಲಿ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿರುವುದಾಗಿ ನ್ಯಾಯಾಲಯ ಹೇಳಿದೆ.
ಶಾಸಕರ ಭವನದಲ್ಲಿ ನೆಲೆಸಿರುವ ಭ್ರಷ್ಟ ರಾಜಕಾರಣಿಗಳನ್ನು ಬೆದರಿಸುವ ನಿಟ್ಟಿನಲ್ಲಿ ಅಂದು (2003) ಎಸ್ ಐ ಆಗಿದ್ದ ಮಟ್ಟಣ್ಣನವರ್ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

WWC Final 2025: ಶಫಾಲಿ, ದೀಪ್ತಿ ಸ್ಫೋಟಕ ಬ್ಯಾಟಿಂಗ್; ಆಫ್ರಿಕಾಗೆ 299 ರನ್ ಗುರಿ ನೀಡಿದ ಭಾರತ!

ಪತಂಜಲಿ ವಿಶ್ವವಿದ್ಯಾಲಯದಲ್ಲಿ ಶೇ. 64ರಷ್ಟು ಮಹಿಳಾ ಪದವೀಧರರು: ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘನೆ!

Bihar Poll: ಕೂಸು ಹುಟ್ಟುವ ಮುನ್ನವೇ ಕುಲಾವಿ, ನ.18 ಕ್ಕೆ 'ಸಿಎಂ' ಆಗಿ ಪ್ರಮಾಣ ವಚನ ಸ್ವೀಕರಿಸ್ತೀನಿ- ತೇಜಸ್ವಿ ಯಾದವ್

ಕಾಂಗ್ರೆಸ್ ಹಣೆಗೆ ಗನ್ ಇಟ್ಟು ತೇಜಸ್ವಿ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ: ಪ್ರಧಾನಿ ಮೋದಿ

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ISRO! ಅತೀ ಭಾರವಾದ ರಾಕೆಟ್ ಮೂಲಕ CMS-03 ಉಪಗ್ರಹ ಯಶಸ್ವಿ ಉಡಾವಣೆ!

SCROLL FOR NEXT