ಸಿದ್ದರಾಮಯ್ಯ 
ರಾಜ್ಯ

ಮೈಸೂರಿನ ಗುರು, ರಾಮನಗರದ ಜನಾರ್ದನ ಸ್ವೀಟ್ ಸ್ಟಾಲ್ ಮೈಸೂರ್ ಪಾಕ್ ಕೊಂಡಾಡಿದ ಸಿಎಂ

ರಾಮನಗರದ ಜನಾರ್ದನ್ ಮೈಸೂರ್ ಪಾಕ್​ಗೆ ಹೋಲಿಸಿದರೆ ನಂದಿನಿ ಮೈಸೂರ್ ಪಾಕ್ ಗುಣಮಟ್ಟ ಹಾಗೂ ರುಚಿ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ..

 ಬೆಂಗಳೂರು: ರಾಮನಗರದ ಜನಾರ್ದನ್ ಮೈಸೂರ್ ಪಾಕ್​ಗೆ ಹೋಲಿಸಿದರೆ ನಂದಿನಿ ಮೈಸೂರ್ ಪಾಕ್ ಗುಣಮಟ್ಟ ಹಾಗೂ ರುಚಿ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಬಮೂಲ್) ಆಯೋಜಿಸಿದ್ದ ಹೊಸಕೋಟೆ ಡೇರಿ ಮತ್ತು ಉತ್ಪನ್ನ ಘಟಕಗಳನ್ನು ಸಿಎಂ ಉದ್ಘಾಟಿಸಿದರು. ಉಗ್ರಾಣ, ಮಾರುಕಟ್ಟೆ ಕಚೇರಿ, ಉಪಹಾರ ಗೃಹ ಮತ್ತು ಸಭಾಂಗಣಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.

ಮೈಸೂರಿನ ಗುರು ಸ್ವೀಟ್ ಮಾರ್ಟ್ ಮತ್ತು ರಾಮನಗರದ ಜನಾರ್ದನ್ ಮೈಸೂರು ಪಾಕ್ ರುಚಿ ಮತ್ತು ಗುಣಮಟ್ಟ ಕೆಎಂಎಫ್​ನ ನಂದಿನಿ ಮೈಸೂರ್ ಪಾಕ್​ಗಿಲ್ಲ. ಕೆಎಂಎಫ್ ತನ್ನ ಗುಣಮಟ್ಟ ಹೆಚ್ಚಿಸಿಕೊಂಡರೆ ಅಮೂಲ್​ಗೂ ಸ್ಪರ್ಧೆ ಒಡ್ಡಬಹುದು ಮತ್ತು ದೇಶ, ವಿದೇಶದೆಲ್ಲೆಡೆ ಕೆಎಂಎಫ್ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸಬಹುದು ಎಂದರು.

ಕೆಎಂಎಫ್ ಮೈಸೂರ್ ಪಾಕ್ ರುಚಿಯಿಲ್ಲವೆಂದಾಗ ವೇದಿಕೆಯಲ್ಲಿನ ಗಣ್ಯರೇ ಮೆಲ್ಲನೆ ವಿರೋಧ ವ್ಯಕ್ತಪಡಿಸಿದರು. ಸಭಿಕರೂ ನಂದಿನಿ ಮೈಸೂರ್ ಪಾಕ್ ಚೆನ್ನಾಗಿದೆ ಎಂದಾಗ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚೆನ್ನಾಗಿದ್ದರೆ ಸಂತೋಷ ಎಂದು ಹೇಳಿದರು.ಸಚಿವರಾದ ಮಹದೇವಪ್ರಸಾದ್, ಡಿ.ಕೆ. ಶಿವಕುಮಾರ್, ಎ. ಮಂಜು, ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ಮತ್ತಿತರರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT