ಸಾಂದರ್ಭಿಕ ಚಿತ್ರ 
ರಾಜ್ಯ

ಅಕ್ಷಯ ತೃತೀಯ: ದಾಖಲೆಯ ಪ್ರಮಾಣದಲ್ಲಿ ಚಿನ್ನ ಮಾರಾಟ

ಅಕ್ಷಯ ತೃತೀಯ ಪ್ರಯುಕ್ತ ಸೋಮವಾರ ಚಿನ್ನದ ಮಳಿಗೆಗಳಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಖಲೆಯ...

ಬೆಂಗಳೂರು : ಅಕ್ಷಯ ತೃತೀಯ ಪ್ರಯುಕ್ತ ಸೋಮವಾರ ಚಿನ್ನದ ಮಳಿಗೆಗಳಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ.  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಖಲೆಯ ಪ್ರಮಾಣದ ವಹಿವಾಟು ನಡೆದಿದೆ.

ಗ್ರಾಹಕರನ್ನು ಸೆಳೆಯಲು ಮಳಿಗೆಗಳು ಕಳೆದೊಂದು ತಿಂಗಳಿಂದಲೇ ವಿವಿಧ ರೀತಿಯ ಆಫರ್​ಗಳನ್ನು ಘೊಷಿಸಿದ್ದವು. ಎಲ್ಲ ಮಳಿಗೆಗಳಲ್ಲಿ ಸೋಮವಾರ ಮುಂಜಾನೆ ನಡೆದ ವಿಶೇಷ ಪೂಜೆ ಗ್ರಾಹಕರನ್ನು ಸೆಳೆಯಿತು.

ಗ್ರಾಹಕರಿಗೆ ಆಭರಣಗಳ ಜತೆಗೆ ಉಚಿತ ಭವಿಷ್ಯ ಹೇಳುವುದು, ದೇವರ ವಿಗ್ರಹಗಳ ಕೊಡುಗೆ ಮತ್ತಿತರ ಕೊಡುಗೆಗಳ ಮೂಲಕ ದಿನಪೂರ್ತಿ ವ್ಯಾಪಾರಿಗಳು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿದ್ದರು. ಅನೇಕ ಕಡೆ ಜನರು ಕ್ಯೂ ನಿಂತು ಆಭರಣ ಕೊಂಡರು. ಸಾಮಾನ್ಯ ದಿನಗಳಿಗಿಂತ ನಿನ್ನೆ 10 ಪಟ್ಟು ಹೆಚ್ಚು ಚಿನ್ನದ ವ್ಯಾಪಾರ ನಡೆದಿದೆ ಎಂದು ಧವನಂ ಜ್ಯುವೆಲ್ಲರ್ಸ್ ನ ನಿರ್ದೇಶಕ ರವಿ ತಿಳಿಸಿದ್ದಾರೆ.

ವೈಶಾಖ ಮಾಸದಂದು ಬರುವ ಈ ಅಕ್ಷಯ ತೃತೀಯ ಹಿಂದೂ ಹಾಗೂ ಜೈನರಿಗೆ ಪವಿತ್ರ ದಿನವಾಗಿದೆ. ಈ ಶುಭ ದಿನದಲ್ಲಿ ಚಿನ್ನ ಅಥವಾ ಆಸ್ತಿ ಖರೀದಿಸಿದರೇ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT