ರಾಜ್ಯ

ಕುಂದಾಪುರ: ಕೆರೆಯಲ್ಲಿ ಮುಳುಗಿ ತಂದೆ, ಇಬ್ಬರು ಮಕ್ಕಳ ಸಾವು

Lingaraj Badiger
ಕುಂದಾಪುರ: ಈಜಾಡಲೆಂದು ಕೆರೆಗೆ ಇಳಿದಿದ್ದ ಮಕ್ಕಳ ರಕ್ಷಣೆ ಮುಂದಾದ ತಂದೆ ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದ ಉಳ್ಳೂರಿನಲ್ಲಿ ಬುಧವಾರ ನಡೆದಿದೆ.
ಇಂದು ಮಧ್ಯಾಹ್ನ ರಾಘವೇಂದ್ರ(40) ಅವರ ಮಕ್ಕಳಾದ ಪ್ರಕಾಶ್ ಹಾಗೂ ಯೋಗೇಶ್ ಇಬ್ಬರೂ ಕೆರೆಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಈ ವೇಳೆ ಮಕ್ಕಳು ರಕ್ಷಣೆಗಾಗಿ ಕೂಗಿಕೊಂಡಾಗ ತಂದೆ ರಾಘವೇಂದ್ರ ಅವರು ರಕ್ಷಣೆಗೆ ಯತ್ನಿಸಿದ್ದಾರೆ.
ಆದರೆ ದುರಾದೃಷ್ಟವಶಾತ್ ತಂದೆ ಕೂಡಾ ನೀರಿನ ಸೆಳೆತಕ್ಕೆ ಸಿಲುಕಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT