ಕಾಮೆಡ್'ಕೆ ಫಲಿತಾಂಶ ಪ್ರಕಟ: ಮೊದಲೆರಡು ಸ್ಥಾನಗಳಲ್ಲಿ ಬೆಂಗಳೂರಿನ ಅಧೋಕ್ಷಜ ಮಾಧ್ವರಾಜ್, ಆರ್. ರಾಹುಲ್ 
ರಾಜ್ಯ

ಕಾಮೆಡ್'ಕೆ ಫಲಿತಾಂಶ ಪ್ರಕಟ: ರಾಜ್ಯಕ್ಕೆ 7 ರ್ಯಾಂಕ್

ವೃತ್ತಿಪರ ಕೋರ್ಸ್ ಗಳ ಖಾಸಗಿ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಟಾಪ್ 10 ರಲ್ಲಿ 7 ರ್ಯಾಂಕ್...

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಖಾಸಗಿ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಟಾಪ್ 10 ರಲ್ಲಿ 7 ರ್ಯಾಂಕ್ ಗಳು ರಾಜ್ಯಕ್ಕೆ ಲಭಿಸಿವೆ.

ದೇಶದಲ್ಲಿ ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ದೇಶದಲ್ಲಿ ಏಕರೂಪದ ಪರೀಕ್ಷೆ ನೀಟ್ ಜಾರಿಯಾದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ ಕೋರ್ಸ್ ಗಳ ಪ್ರವೇಶಕ್ಕೆ ಮಾತ್ರ ಕಾಮೆಡ್ ಕೆ ಯುಜಿಇಜಿಯನ್ನು ಮೊದಲ ಬಾರಿಗೆ ಆನ್ ಲೈನ್ ಮೂಲಕ ನಡೆಸಿತ್ತು. ಇದರಂತೆ ನಿಗದಿ ದಿನಾಂಕಕ್ಕಿಂತ ಒಂದು ದಿನ ಮೊದಲೇ ಫಲಿತಾಂಶ ಹೊರಬಿದ್ದಿದ್ದು, ಮೊದಲ ಹಾಗೂ ಎರಡನೇ ರ್ಯಾಂಕ್ ಸೇರಿದಂತೆ ಟಾಪ್ 10ರಲ್ಲಿ 7 ರ್ಯಾಂಕ್ ಗಳನ್ನು ರಾಜ್ಯದ ವಿದ್ಯಾರ್ಥಿಗಳು ಪಡೆದಿದ್ದಾರೆ.

ಇದರಂತೆ ಇಂದು ಮಧ್ಯಾಹ್ನ 12 ಗಂಟೆ ನಂತರ ವಿದ್ಯಾರ್ಥಿಗಳು ಕಾಮೆಡ್ ಕೆ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.

ಪ್ರಸ್ತುಕ ಪ್ರಕಟಗೊಂಡಿರುವ ಫಲಿತಾಂಶದ ಪ್ರಕಾರ ಮೊದಲ ಹಾಗೂ ದ್ವಿತೀಯ ರ್ಯಾಂಕ್ ಬೆಂಗಳೂರಿನ ಅಧೋಕ್ಷಜ ವಿ. ಮಾಧಅವರಾಜ್ ಹಾಗೂ ಆರ್. ರಾಹುಲ್ ಎಂಬುವವರು ಪಡೆದಿದ್ದು, ತೃತೀಯ ರ್ಯಾಂಕ್ ನ್ನು ತೆಲಂಗಾಣದ ಸಾಯಿ ಹಿಮಲ್ ಅಲ್ಲು ಪಡೆದುಕೊಂಡಿದ್ದಾರೆ.

ಮೊದಲ 10 ರ್ಯಾಂಕ್ ಗಳ ಪೈಕಿ 56 ರ್ಯಾಂಕ್ ಗಳನ್ನು ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ. ಮೊದಲ 1000ರ್ಯಾಂಕ್ ಪಡೆದವರು ಪರೀಕ್ಷೆಯಲ್ಲಿ ಶೇ.70 ಅಂಕ ಪಡೆದಿದ್ದಾರೆ.

1361 ಅಭ್ಯರ್ಥಿಗಳು ಶೇ.66ರಿಂದ ಶೇ.70. ಇದೇ ರೀತಿ 2373 ಅಭ್ಯರ್ಥಿಗಳು ಶೇ.60 ರಿಂದ ಶೇ.65 ಮತ್ತು 6854 ಅಭ್ಯರ್ಥಿಗಳು ಶೇ.60 ರಿಂದ 50 ಅಭ್ಯರ್ಥಿಗಳ ಪೈಕಿ 55, 680 (ಶೇ.81) ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಿದ್ದರು. ಇದರಂತೆ ಎಂಜಿನಿಯರಿಂಗ್ ನಲ್ಲಿ ಪರೀಕ್ಷೆ ಬರೆದ ಎಲ್ಲರಿಗೂ ಅರ್ಹತಾ ನೀಡುವುದರಿಂದ ಪರೀಕ್ಷೆ ಬರೆದ 55,680 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT