ರಾಜ್ಯ

ರಾಮ್ ನಾಥ್ ಗೋಯೆಂಕಾ ಪ್ರಶಸ್ತಿಗೆ ಭಾಜನರಾದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ

Shilpa D

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಅವರಿಗೆ ಪ್ರತಿಷ್ಟಿತ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿ ದೊರೆತಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಬೆಂಗಳೂರಿನ ಪ್ರಧಾನ ಪ್ರತಿನಿಧಿಯಾಗಿರುವ ಕ್ರಿಸ್ಟಿನ್ ಅವರಿಗೆ ಪ್ರಕಾಶ್ ಕಾರ್ಡ್ಲೆ ಮೆಮೋರಿಯಲ್ ಪ್ರಶಸ್ತಿಯೂ  ಲಭಿಸಿದೆ. ಚೆನ್ನೈನ ನಾಗರಿಕ ಸಮಸ್ಯೆಗಳ ಕುರುತು ಮಾಡಿದ ವರದಿಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಪ್ರಶಸ್ತಿಯನ್ನ ನವದೆಹಲಿಯಲ್ಲಿ ಪ್ರಧಾನ ಮಾಡಿದ್ದರು.

ಗೋಯೆಂಕಾ ಪ್ರಶಸ್ತಿಯನ್ನು 28 ವಿಭಾಗಗಳಲ್ಲಿ  ಕೊಡಲಾಗುತ್ತದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ರಾಮ್ ನಾಥ್ ಗೊಯೆಂಕಾ ಅವರ ಸ್ಮರಣಾರ್ಥ 2005 ರಿಂದ ಪತ್ರಿಕೋದ್ಯಮ ಪ್ರಶಸ್ತಿ ನೀಡಲಾಗುತ್ತಿದೆ.

SCROLL FOR NEXT