ಹಂಪಿ ಉತ್ಸವದ ನೋಟ 
ರಾಜ್ಯ

ಹಂಪಿ ಉತ್ಸವ: ವಿರೂಪಾಕ್ಷ ದೇವರ 10 ಕೆಜಿ ಚಿನ್ನದ ಕಿರೀಟ ಎಲ್ಲರ ಆಕರ್ಷಣೆಯ ಕೇಂದ್ರ

ಹಂಪಿ ಉತ್ಸವ ಗತಕಾಲದ ವೈಭವವನ್ನು ಮರುಕಳಿಸುವಂತಿದೆ. ಇದಕ್ಕೆ ಕಾರಣ ಹಂಪಿಯಲ್ಲಿರುವ ವಿರೂಪಾಕ್ಷ ದೇವರು, ವಿರೂಪಾಕ್ಷನ 10 ಕೆಜಿ ತೂಕದ ಚಿನ್ನದ ಕಿರೀಟ ...

ಹಂಪಿ: ಹಂಪಿ ಉತ್ಸವ ಗತಕಾಲದ ವೈಭವವನ್ನು ಮರುಕಳಿಸುವಂತಿದೆ. ಇದಕ್ಕೆ ಕಾರಣ ಹಂಪಿಯಲ್ಲಿರುವ ವಿರೂಪಾಕ್ಷ ದೇವರು, ವಿರೂಪಾಕ್ಷನ 10 ಕೆಜಿ ತೂಕದ ಚಿನ್ನದ ಕಿರೀಟ ನೋಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಸಿದ್ದಾರೆ.

1509 ರಲ್ಲಿ ರಾಜ ಕೃಷ್ಣದೇವರಾಯ ಹಂಪಿ ವಿರೂಪಾಕ್ಷನಿಗೆ 10 ಕೆಜಿ ತೂಕದ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು. ವಿಜಯ ನಗರ ಸಂತತಿ ಅಳಿದು ಇತಿಹಾಸ ಸೇರಿದೆ. ಆದರೆ ವಿಜಯನಗರ ಅರಸರ ಗತ ವೈಭವವನ್ನು ಹಾಗೂ 15 ನೇ ಶತಮಾನಗ ಕಲಾ ಶ್ರೀಮಂತಿಕೆಗೆ ಈ ಕಿರೀಟ ಸಾಕ್ಷಿಯಾಗಿದೆ.

ವಿದೇಶಿ ಪ್ರವಾಸಿಗರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದಿರುವ  ಸಾವಿರಾರು ಭಕ್ತರು ಚಿನ್ನದ ಕಿರೀಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಶೇಷ ದಿನಗಳಲ್ಲಿ ವಿರೂಪಾಕ್ಷ ವಿಗ್ರಹಕ್ಕೆ ಚಿನ್ನದ ಕಿರೀಟದಿಂದ ಅಲಂಕಾರ ಮಾಡಲಾಗುತ್ತದೆ, ಅನಂತರ ಈ ಕಿರೀಟವನ್ನು ಸರ್ಕಾರದ ಖಜಾನೆಯಲ್ಲಿಡಲಾಗುತ್ತದೆ,. ವರ್ಷದಲ್ಲಿ 11 ಬಾರಿ ಭಕ್ತರು ಈ ಕಿರೀಟವನ್ನು ನೋಡಲು ಅವಕಾಶವಿರುತ್ತದೆ.

ವಿರೂಪಾಕ್ಷ ದೇವಾಲಯದ ಮುಂದೆ, ಮುತ್ತು ರತ್ನ ಗಳನ್ನು ಜನ ರಸ್ತೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ, ಇನ್ನೂ ಕೃಷ್ಣದೇವರಾಯ ಸಮರ್ಪಿಸಿರುವ ಈ ಕಿರೀಟ ಪ್ರಸಕ್ತ ಮಾರುಕಟ್ಟೆ ಬೆಲೆಯಲ್ಲಿ 3 ಕೋಟಿ ರೂ ಆಗಲಿದೆ. ಹೀಗಾಗಿ ಬಿಗಿ ಭದ್ರತೆಯಲ್ಲಿ ಕಿರೀಟವನ್ನು ಇಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT