ಹಂಪಿ ಉತ್ಸವದ ನೋಟ 
ರಾಜ್ಯ

ಹಂಪಿ ಉತ್ಸವ: ವಿರೂಪಾಕ್ಷ ದೇವರ 10 ಕೆಜಿ ಚಿನ್ನದ ಕಿರೀಟ ಎಲ್ಲರ ಆಕರ್ಷಣೆಯ ಕೇಂದ್ರ

ಹಂಪಿ ಉತ್ಸವ ಗತಕಾಲದ ವೈಭವವನ್ನು ಮರುಕಳಿಸುವಂತಿದೆ. ಇದಕ್ಕೆ ಕಾರಣ ಹಂಪಿಯಲ್ಲಿರುವ ವಿರೂಪಾಕ್ಷ ದೇವರು, ವಿರೂಪಾಕ್ಷನ 10 ಕೆಜಿ ತೂಕದ ಚಿನ್ನದ ಕಿರೀಟ ...

ಹಂಪಿ: ಹಂಪಿ ಉತ್ಸವ ಗತಕಾಲದ ವೈಭವವನ್ನು ಮರುಕಳಿಸುವಂತಿದೆ. ಇದಕ್ಕೆ ಕಾರಣ ಹಂಪಿಯಲ್ಲಿರುವ ವಿರೂಪಾಕ್ಷ ದೇವರು, ವಿರೂಪಾಕ್ಷನ 10 ಕೆಜಿ ತೂಕದ ಚಿನ್ನದ ಕಿರೀಟ ನೋಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಸಿದ್ದಾರೆ.

1509 ರಲ್ಲಿ ರಾಜ ಕೃಷ್ಣದೇವರಾಯ ಹಂಪಿ ವಿರೂಪಾಕ್ಷನಿಗೆ 10 ಕೆಜಿ ತೂಕದ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು. ವಿಜಯ ನಗರ ಸಂತತಿ ಅಳಿದು ಇತಿಹಾಸ ಸೇರಿದೆ. ಆದರೆ ವಿಜಯನಗರ ಅರಸರ ಗತ ವೈಭವವನ್ನು ಹಾಗೂ 15 ನೇ ಶತಮಾನಗ ಕಲಾ ಶ್ರೀಮಂತಿಕೆಗೆ ಈ ಕಿರೀಟ ಸಾಕ್ಷಿಯಾಗಿದೆ.

ವಿದೇಶಿ ಪ್ರವಾಸಿಗರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದಿರುವ  ಸಾವಿರಾರು ಭಕ್ತರು ಚಿನ್ನದ ಕಿರೀಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಶೇಷ ದಿನಗಳಲ್ಲಿ ವಿರೂಪಾಕ್ಷ ವಿಗ್ರಹಕ್ಕೆ ಚಿನ್ನದ ಕಿರೀಟದಿಂದ ಅಲಂಕಾರ ಮಾಡಲಾಗುತ್ತದೆ, ಅನಂತರ ಈ ಕಿರೀಟವನ್ನು ಸರ್ಕಾರದ ಖಜಾನೆಯಲ್ಲಿಡಲಾಗುತ್ತದೆ,. ವರ್ಷದಲ್ಲಿ 11 ಬಾರಿ ಭಕ್ತರು ಈ ಕಿರೀಟವನ್ನು ನೋಡಲು ಅವಕಾಶವಿರುತ್ತದೆ.

ವಿರೂಪಾಕ್ಷ ದೇವಾಲಯದ ಮುಂದೆ, ಮುತ್ತು ರತ್ನ ಗಳನ್ನು ಜನ ರಸ್ತೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ, ಇನ್ನೂ ಕೃಷ್ಣದೇವರಾಯ ಸಮರ್ಪಿಸಿರುವ ಈ ಕಿರೀಟ ಪ್ರಸಕ್ತ ಮಾರುಕಟ್ಟೆ ಬೆಲೆಯಲ್ಲಿ 3 ಕೋಟಿ ರೂ ಆಗಲಿದೆ. ಹೀಗಾಗಿ ಬಿಗಿ ಭದ್ರತೆಯಲ್ಲಿ ಕಿರೀಟವನ್ನು ಇಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT