2ಸಾವಿರ ರು ನ ಜೆರಾಕ್ಸ್ ಪ್ರತಿ 
ರಾಜ್ಯ

ಕರ್ನಾಟಕದಲ್ಲಿ ಪತ್ತೆಯಾಯ್ತು 2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು

: 2000 ರು ಮುಖಬೆಲೆಯ ನೋಟು ಹೋಲುವಂತಹ ಜೆರಾಕ್ಸ್ ನೋಟು ನೀಡಿ ರೈತನಿಗೆ ಈರುಳ್ಳಿ ವ್ಯಾಪಾರಿಯೊಬ್ಬ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ

ಚಿಕ್ಕಮಗಳೂರು: 2000 ರು ಮುಖಬೆಲೆಯ ನೋಟು  ಹೋಲುವಂತಹ ಜೆರಾಕ್ಸ್ ನೋಟು ನೀಡಿ ರೈತನಿಗೆ ಈರುಳ್ಳಿ ವ್ಯಾಪಾರಿಯೊಬ್ಬ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತ ಅಶೋಕ್ ಎಂಬುವರಿಗೆ  ಈರುಳ್ಳಿ ಖರೀದಿಸಿದ ವ್ಯಕ್ತಿ ನಕಲಿ ನೋಟು ನೀಡಿ ವಂಚಿಸಿದ್ದಾನೆ.

ಅಶೋಕ್ ಅಂಗಡಿಗೆ ಬಂದ ವರ್ತಕ 2ಸಾವಿರ ರುಪಾಯಿನ ಜೆರಾಕ್ಸ್  ನೋಟ್ ನೀಡಿ 3 ಚೀಲ ಈರುಳ್ಳಿ ಖರೀದಿಸಿ ಯಾಮಾರಿಸಿದ್ದಾನೆ. ತನ್ನ ಬಳಿಯಿದ್ದ ಎರಡು ಸಾವಿರ ರೂ ನೋಟನ್ನು ಅಶೋಕ್ ತನ್ನ ಸ್ನೇಹಿತರಿಗೆ ತೋರಿಸಿದಾಗ ಅದು ನಕಲಿ ನೋಟ್ ಎಂದು ತಿಳಿದು ಬಂದಿದೆ.

ಈ ನೋಟಿನ ಬಾರ್ಡರ್‍ನಲ್ಲಿ ಕತ್ತರಿಯಿಂದ ಕತ್ತರಿಸಿರೋದು ಕಾಣ್ತಿದೆ. ಸೈಡ್ ಎಡ್ಜ್ ನಲ್ಲಿ  ಇರಬೇಕಾದ 7 ಗೆರೆಗಳು ಇಲ್ಲ. ಅಲ್ಲದೆ ಅಸಲಿ ನೋಟಿನ ನಾಲ್ಕು ಮೂಲೆಗಳು ಸ್ಪಷ್ಟವಾಗಿದ್ದು, ನಕಲಿ ನೋಟಿನ ಮೂಲೆಗಳು ಅನುಮಾನ ಮೂಡಿಸುವಂತಿದೆ. ಇದೀಗ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT