ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: 'ದೆವ್ವದ ಮನೆ' ಯಲ್ಲಿದ್ದ ಆನೆ ದಂತ ವಶ, ಓರ್ವನ ಬಂಧನ

ಮನೆಯೊಂದರ ಮೇಲೆ ದಾಳಿನಡೆಸಿರುವ ಬೆಳಗಾವಿ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಆನೆದಂತ ವಶ ಪಡಿಸಿಕೊಂಡಿದ್ದಾರೆ....

ಬೆಳಗಾವಿ: ಮನೆಯೊಂದರ ಮೇಲೆ ದಾಳಿನಡೆಸಿರುವ ಬೆಳಗಾವಿ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಆನೆದಂತ ವಶ ಪಡಿಸಿಕೊಂಡಿದ್ದಾರೆ.

ಓರ್ವನನ್ನು ಬಂಧಿಸಿದ ಪೊಲೀಸರು ಆನೆದಂತ, ಪ್ರಾಣಿಗಳ ಚರ್ಮ, ಉಗುರು ಸೇರಿದಂತೆ ಕೋಟ್ಯಾಂತರ ರೂ. ಮೌಲ್ಯದ ಅರಣ್ಯ ಸಂಪನ್ಮೂಲ ವಶಕ್ಕೆ ಪಡೆದಿದ್ದಾರೆ.

ಸಲೀಂ ಚಾಮಡೇವಾಲೆ ಅಎಂಬುವನನ್ನು  ಪೊಲೀಸರು ಬಂಧಿಸಿದ್ದಾರೆ. ಆನೆ ದಂತ ಸೇರಿದಂತೆ ಸಾವಿರಕ್ಕೂ ಹೆಚ್ಚು ಜಿಂಕೆ, ಸಾರಂಗದ ಕೊಂಬುಗಳು ಮತ್ತು ಅಪಾರ ಪ್ರಮಾಣದ ಪೆಂಗ್ವಿಲಿನ್ ಚಿಪ್ಪುಗಳನ್ನು ಈತನಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈತನಿಂದ ವಶಕ್ಕೆ ಪಡೆದ ಆನೆ ದಂತ, ಜಿಂಕೆ, ಸಾರಂಗದ ಕೊಂಬುಗಳು ನೂರಾರು ಕೋಟಿ ಬೆಲೆ ಬಾಳಲಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
 
ಬೆಳಗಾವಿಯಿಂದ ವಿಯೆಟ್ನಾಂ ಹಾಗೂ ಚೀನಾ ದೇಶಕ್ಕೆ ಇವುಗಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆನೆದಂತ ಸೇರಿದಂತೆ ಬಚ್ಚಿಟ್ಟಿದ ವಸ್ತುಗಳು ಯಾರ ಕಣ್ಣಿಗೂ ಬೀಳಬಾರದು ಎಂದು ಯೋಚಿಸಿದ್ದ ಆತ ಆತನ ಮನೆಯಲೆಲ್ ದೆವ್ವವಿದೆ ಎಂದು ಹೆದರಿಸಿ ಜನರನ್ನು ಹತ್ತಿರಕ್ಕೆ ಬರಲು ಬಿಡುತ್ತಿರಲಿಲ್ಲ. ಇನ್ನೂ ಈತನ ಕುಟುಂಬದ ಇತರ ಸದಸ್ಯರು ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಜಾವೀದ್ ಮುಶಾಪುರ, ಅಡಿವೇಶ ಗೂದಿಗೊಪ್ಪ ನೇತೃತ್ವದ ತಂಡ ಈ ದಾಳಿ ನಡೆಸಿದೆ.  ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT