ರಾಜ್ಯ

ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಆರೋಪ; 250 ಪ್ರತಿಭಟನಾಕಾರರ ವಿರುದ್ಧ ಎಫ್ ಐಆರ್

Srinivasamurthy VN

ಮಂಡ್ಯ: ತಮಿಳುನಾಡಿಗೆ ನೀರು ಹರಿಸಿದ್ದನ್ನು ವಿರೋಧಿಸಿ ಮಂಡ್ಯದಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಯಲ್ಲಿ ಅಪಾರ ಪ್ರಮಾಣದ ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟವಾಗಿದ್ದು, ಇದೇ  ಆರೋಪದಡಿ ಸುಮಾರು 250ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರತಿಭಟನೆಯಿಂದ ಸರ್ಕಾರಿ ಆಸ್ತಿ-ಪಾಸ್ತಿಗೆ ಭಾರಿ ನಷ್ಟವಾಗಿದೆ ಎಂದು ಆರೋಪಿಸಿ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದು, ಸುಮಾರು 250 ಮಂದಿ ಅನಾಮಿಕ  ಪ್ರತಿಭಟನಾಕಾರರು ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ಕಬಿನಿ ಜಲಾಶಯಕ್ಕೆ ಮುತ್ತಿಗೆ!

ಅತ್ತ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲು ಮುಟ್ಟಿರುವಂತೆಯೇ ಇತ್ತ ಕಬಿನಿ ಜಲಾಶಯಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಆದರೆ ಜಲಾಶಯಕ್ಕೆ  ವ್ಯಾಪಕ ಭದ್ರತೆ ಒದಗಿಸಿದ್ದರಿಂದ ಪೊಲೀಲಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು ಹಾಗೂ ಕನ್ನಡಪರ ಸ೦ಘಟನೆಗಳ ನೂರಾರು  ಕಾಯ೯ಕತ೯ರನ್ನು ಪೊಲೀಸರು ಬ೦ಧಿಸಿ ಬಿಡುಗಡೆಗೊಳಿಸಿದರು. ಮುತ್ತಿಗೆ ಹಾಕಲು ತೆರಳಿದ ರೈತರನ್ನು ಬ೦ಧಿಸಲು ಪೊಲೀಸರು ಮು೦ದಾಗುತ್ತಿದ೦ತೆ ರೈತ ಮುಖ೦ಡರಿಬ್ಬರು ಆತ್ಮಹತ್ಯೆಗೆ  ಯತ್ನಿಸಿದ ಘಟನೆಯೂ ನಡೆಯಿತು.

SCROLL FOR NEXT