ತಂದೆಯೊಂದಿಗೆ ಹರಿಣಿ ಸ್ವಾಮಿನಾಥನ್ 
ರಾಜ್ಯ

ಗಿಡ ನೆಡುವ ಮೂಲಕ ಮಗಳ ಜನ್ಮದಿನ ಆಚರಿಸುವ ಆದರ್ಶ ಪೋಷಕರು

6 ವರ್ಷದ ಹರಿಣಿ ಸ್ವಾಮಿನಾಥನ್ ಅವರ ಪೋಷಕರು ಮಾತ್ರ ತಮ್ಮ ಮಗಳ ಜನ್ಮದಿನವನ್ನು ಕಳೆದ 6 ವರ್ಷಗಳಿಂದ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡುತ್ತಿದ್ದಾರೆ.

ಬೆಂಗಳೂರು: ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಬೆಂಬಳೂರಿನಲ್ಲಿರುವ 6 ವರ್ಷದ ಹರಿಣಿ ಸ್ವಾಮಿನಾಥನ್ ಅವರ ಪೋಷಕರು ಮಾತ್ರ ತಮ್ಮ ಮಗಳ ಜನ್ಮದಿನವನ್ನು ಕಳೆದ 6 ವರ್ಷಗಳಿಂದ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡುತ್ತಿದ್ದಾರೆ. 
ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುವ ಸ್ವಾಮಿನಾಥನ್ ಅವರು ತಮ್ಮ ಮಗಳ ಪ್ರತಿ ವರ್ಷದ ಜನ್ಮದಿನದ ಆಚರಣೆಯಲ್ಲೂ 111 ಗಿಡ ನೆಡುತ್ತಾರೆ. 2012 ರಿಂದ ಅಂದರೆ ತಮ್ಮ ಮಗಳಿಗೆ 2 ವರ್ಷ ತುಂಬಿದಾಗಿನಿಂದ ಸ್ವಾಮಿನಾಥನ್ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಹವ್ಯಾಸ ಹೊಂದಿದ್ದಾರೆ. 
ಗುರು ಮಹತ್ರಿಯ ರಾ ಅವರ ಉಪನ್ಯಾಸ ಕೇಳಿದಾಗಿನಿಂದ 11 ಸಂಖ್ಯೆಯ ಮಹತ್ವದ ಬಗ್ಗೆ ಆಕರ್ಷಿತರಾಗಿರುವ ಸ್ವಾಮಿನಾಥನ್ ಪ್ರತಿ ವರ್ಷವೂ 111 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದರಂತೆ. ಹರಿಣಿಯ ಮೊದಲ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೆವು. ಆ ನಂತರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು 2005 ರಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ವಾಸಿಸುತ್ತಿರುವ ಸ್ವಾಮಿನಾಥನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್, ನದಿ ಪಾತ್ರದಲ್ಲಿ ಕಟ್ಟೆಚ್ಚರ

ನಿನ್ನ ತಲೆ ಕಡಿತೀವಿ: ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ, ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

2ನೇ ಟೆಸ್ಟ್ ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ; ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ WTC ಅಂಕಪಟ್ಟಿಯಲ್ಲಿ ಮಹತ್ತರ ಬದಲಾವಣೆ!