ಬಾವಿಯಿಂದ ನೀರು ಸಂಗ್ರಹಿಸುತ್ತಿರುವ ಗ್ರಾಮಸ್ಥರು 
ರಾಜ್ಯ

ಬೆಳಗಾವಿ: ಈ ಗ್ರಾಮದಲ್ಲಿ ಒಂದು ರೇಷನ್ ಕಾರ್ಡ್ ಗೆ 2 ದಿನಕ್ಕೊಮ್ಮೆ 2 ಬಿಂದಿಗೆ ನೀರು ಮಾತ್ರ!

ಬೆಳಗಾವಿಯ ಹಲವು ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಗ್ರಾಮದಲ್ಲಿರುವ ಬಾವಿಯಿಂದ ಎರಡು ದಿನಗಳಿಗೊಮ್ಮೆ 2 ಬಿಂದಿಗೆ ಮಾತ್ರ ನೀರು...

ಬೆಳಗಾವಿ: ಬೆಳಗಾವಿಯ ಹಲವು ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಗ್ರಾಮದಲ್ಲಿರುವ ಬಾವಿಯಿಂದ ಎರಡು ದಿನಗಳಿಗೊಮ್ಮೆ 2 ಬಿಂದಿಗೆ ಮಾತ್ರ ನೀರು ನೀಡಲಾಗುತ್ತಿದೆ. 
ಬೆಳಗಾವಿಯ ಖಾನಾಪುರದ ಗ್ರಾಮವೊಂದರಲ್ಲಿ ಒಂದು ರೇಷನ್ ಕಾರ್ಡ್ ಗೆ ಕೇವಲ ಎರಡು ಬಿಂದಿಗೆ ಮಾತ್ರ ಕುಡಿಯುವ ನೀರು ನೀಡಲಾಗುತ್ತಿದೆ. ಹೆಚ್ಚು ನೀರು ಬಳಸಿದರೆ ಕುಡಿಯುವ ನೀರು ಪೂರೈಸುವ ಬಾವಿ ಬತ್ತಿ ಹೋಗುತ್ತದೆ ಎಂಬ ಕಾರಣಕ್ಕೆ ಸುಮಾರು 800 ಮಂದಿಯಿರುವ ಮಾನ್ ಎಂಬ ಹಳ್ಳಿಯಲ್ಲಿ ಬಲವಂತವಾಗಿ ಈ ನಿಯಮ ಅನುಸರಿಸಲಾಗುತ್ತಿದೆ.
ಬೆಳಗಾವಿಯಿಂದ 50 ಕಿಮೀ ದೂರದಲ್ಲಿರುವ ಮಾನ್ ಗ್ರಮ ಕಳೆದ ಕೆಲವು ತಿಂಗಳಿಂದ ನೀರಿಗಾಗಿ ತತ್ವಾರ ಪಡುತ್ತಿದೆ. ನೀರಿಗಾಗಿ ಜನ ಪರದಾಡುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಟ್ಯಾಂಕರ್ ಗಳಲ್ಲಿ ನೀರು ಪೂರೈಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇಡೀ ಗ್ರಾಮಕ್ಕೆ ಇದೊಂದೇ ಬಾವಿಯಲ್ಲಿ ಮಾತ್ರ ಕುಡಿಯುವ ನೀರು ಇರುವುದು. ಇದರಿಂದ ಪೂರ್ತಿ ಹಳ್ಳಿಗೆ ನೀರು ಪೂರೈಕೆ ಸಾಧ್ಯವಿಲ್ಲ, ಒಮ್ಮೆನೀರು ತೆಗೆದು ಕೊಂಡರೇ ಮತ್ತೆ ತುಂಬಲು ಒಂದು ದಿನ ಸಮಯ ಬೇಕಾಗುತ್ತದೆ.
ಇತ್ತೀಚೆಗೆ ಊರಿನ ಹಿರಿಯರೆಲ್ಲಾ ಸಭೆ ನಡೆಸಿ, ಒಂದು ರೇಷನ್ ಕಾರ್ಡ್ ಗೆ ಎರಡು ಬಿಂದಿಗೆಯಂತೆ ನೀರು ಪಡೆಯುವ  ನಿಯಮ ರೂಪಿಸಿದ್ದಾರೆ. ಮಾನ್ ಗ್ರಾಮದಲ್ಲಿರುವ ಶೇ.95 ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಕುಡಿಯುವ ನೀರನ್ನು ಪಡೆಯಲು ಗ್ರಾಮಸ್ಥರು ಊರಿನಿಂದ ಸುಮಾರು 4 ಕಿಮೀ ನಡೆದುಕೊಂಡು ಬರಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT