ಆಲಮಟ್ಟಿ ಜಲಾಶಯ 
ರಾಜ್ಯ

ಬರಿದಾಗಿದೆ ಆಲಮಟ್ಟಿ ಜಲಾಶಯ: 16 ದಿನಗಳಿಂದ ನೀರಿಲ್ಲದೇ ವಿಜಯಪುರ ನಾಗರಿಕರ ಪರದಾಟ

ಕಳೆದ ಎರಡು ದಶಕಗಳಲ್ಲಿ ಈ ವರ್ಷ ವಿಜಯಪುರದಲ್ಲಿ ನೀರಿನ ಬವಣೆ ತಾರಕಕ್ಕೇರಿದೆ, ಕಳೆದ 16 ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಲಾಗುತ್ತಿಲ್ಲ..

ವಿಜಯಪುರ: ಕಳೆದ ಎರಡು ದಶಕಗಳಲ್ಲಿ ಈ ವರ್ಷ ವಿಜಯಪುರದಲ್ಲಿ ನೀರಿನ ಬವಣೆ ತಾರಕಕ್ಕೇರಿದೆ, ಕಳೆದ 16 ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಲಾಗುತ್ತಿಲ್ಲ.
ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿರುವ ಕಾರಣ 1997 ರಲ್ಲಿ ಉಂಟಾಗಿದ್ದ ನೀರಿನ ಬವಣೆಯನ್ನು ಮತ್ತೆ ಎದುರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವರು ಆಗಿರುವ ಎಂ.ಬಿ ಪಾಟೀಲ್ ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರುವುದಿಲ್ಲ ಎಂಬ ಭರವಸೆ ನೀಡಿದ್ದರು.
123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಆಲಮಟ್ಟಿ ಜಲಾಶಯದಲ್ಲಿ ಕೇವಲ 12.5 ಟಿಎಂಸಿ ನೀರು ಉಳಿದಿದೆ. ಅದರಲ್ಲಿ ಕೇವಲ 7 ಟಿಎಂಸಿ ನೀರು ಮಾತ್ರ ಕುಡಿಯಲು ಬಳಕೆ ಮಾಡಬಹುದಾಗಿದೆ, ಶುಕ್ರವಾರ ಜಲಾಶಯದ ನೀರಿನ ಮಟ್ಟ 504 ಮೀಟರ್ ಗೆ ತಲುಪಿದೆ. 
ಈ ಬಾರಿಯ ರಾಬಿ ಬೆಳೆಗೆ ಜಲಾಶಯದಿಂದ ನೀರು ಹರಿಸಿದ ಕಾರಣದಿಂದಾಗಿ ನೀರಿನ ಕೊರತೆ ತಲೆದೋರಿದೆ. ಈ ಮೊದಲು ಕೇವಲ ಖಾರಿಫ್ ಬೆಳೆಗಳಿಗೆ ಮಾತ್ರ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ಉಳಿದ ನೀರನ್ನು ವಿಜಯ ಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಆದರೆ ಈ ಬಾರಿ ರೈತರ ಒತ್ತಾಯದಮ ಮೇರೆಗೆ ರಾಬಿ ಬೆಳೆಗೆ ನೀರು ಬಿಡಲಾಗಿತ್ತು.  ಮೊದಲ ಬಾರಿಗೆ ರಾಬಿ ಬೆಳೆಗೆ ನೀರು ಹರಿಸಿದ ಪರಿಣಾಮ ಕುಡಿಯುವ ನೀರಿನ ಬವಣೆ ತಲೆ ದೋರಿದೆ.
ರೈತರಿಗೆ ಅನುಕೂಲವಾಗಲಿ ಎಂದು ನೀರು ಹರಿಸಿದ್ದಕಿಂತ ರಾಜಕೀಯ ಉದ್ದೇಶದಿಂದ ರಬಿ ಬೆಳೆಗೆ ನೀರು ಬಿಡಲಾಗಿದೆ. ಎಂದು ನಗರ ನಿವಾಸಿಗಳು ಅಭಿಪ್ರಾಯ ಪಟ್ಟಿದ್ದಾರೆ. ನೀರು ನಿರ್ವಹಣೆ ಸಂಬಂಧ ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಂಪ್ ಗಳಲ್ಲಿ ಬದಿ ಸೇರಿಕೊಂಡಿರುವ ಕಾರಣ ನೀರು ಪೂರೈಕೆ ನಿಲ್ಲಿಸಲಾಗಿದೆ, ರಿಪೇರಿ ಕೆಲಸ ನಡೆಸುತ್ತಿದ್ದು ಶೀಘ್ರವೇ ನೀರು ಪೂರೈಸುವುದಾಗಿ ಜಲ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT