ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 7,800 ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ಮುಂದಾಗಿರುವ ಬಿಡಿಎ

ಆನ್ ಲೈನ್ ಹರಾಜಿಗೆ ಜನರಿಂದ ನೀರಸ ಪ್ರತಿಕ್ರಿಯೆ ಬಂದಿದ್ದರಿಂದ 7,800 ಮೂಲೆ ನಿವೇಶನಗಳನ್ನು....

ಬೆಂಗಳೂರು: ಆನ್ ಲೈನ್ ಹರಾಜಿಗೆ ಜನರಿಂದ ನೀರಸ ಪ್ರತಿಕ್ರಿಯೆ ಬಂದಿದ್ದರಿಂದ 7,800 ಮೂಲೆ ನಿವೇಶನಗಳನ್ನು(corner site) ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಅಲ್ಲದೆ ವಾಣಿಜ್ಯ ಸಂಸ್ಥೆಗಳಿಗೆ ಬಾಡಿಗೆಗೆ ನೀಡಲು ಕೂಡ ಬಿಡಿಎ ಯೋಚಿಸುತ್ತಿದೆ. 
ಬಿಡಿಎ ಇ-ಹರಾಜು ವಿಧಾನವನ್ನು ಕಳೆದ ದಶಕದಿಂದ ನೀಡುತ್ತಾ ಬಂದಿದೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಡಿಎ ಕಾರ್ಯದರ್ಶಿ ಬಸವರಾಜು, ಬಹಿರಂಗ ಹರಾಜು ಪ್ರಕ್ರಿಯೆಗೆ ಅನುಮತಿ ನೀಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನೋಟುಗಳ ಅಮಾನ್ಯತೆ ನಂತರ ಮೂಲೆ ನಿವೇಶನಗಳ ಮಾರಾಟದಲ್ಲಿ ಕುಂಠಿತವಾಗಿದೆ. ಅದಕ್ಕೂ ಮುಂಚೆ ಮೂಲೆ ನಿವೇಶನಗಳಿಗೆ ಭಾರೀ ಬೇಡಿಕೆಯಿತ್ತು ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತಲುಪಲು ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮಾಡಲಾಗುತ್ತಿದ್ದು,ನಿವೇಶನಗಳು ಹೆಚ್ಚು ಮಾರಾಟವಾಗುವ ವಿಶ್ವಾಸವಿದೆ. ಸಾಮಾನ್ಯವಾಗಿ ಬಿಡಿಎ ನಿವೇಶನಗಳನ್ನು ಬಹಿರಂಗ ಲಾಟರಿ ವಿಧಾನದ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ ಮೂಲೆ ನಿವೇಶನಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಅದನ್ನು ಬಹಿರಂಗ ಹರಾಜು ಮಾಡಲಾಗುತ್ತಿರಲಿಲ್ಲ. ಆನ್ ಲೈನ್ ಮೂಲಕ ಹರಾಜು ಹಾಕಲಾಗುತ್ತಿತ್ತು. ಆದರೆ ಈ ವರ್ಷ ಜನರಿಂದ ಅದಕ್ಕೆ ಪ್ರತಿಕ್ರಿಯೆ ಕಡಿಮೆಯಾಗಿದೆ. ಹೀಗಾಗಿ ಬಹಿರಂಗ ಹರಾಜಿಗೆ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.
ಇಂತಹ ಮೂಲೆ ನಿವೇಶನಗಳು ಕೆಂಗೇರಿ, ಬನಶಂಕರಿ, ಜ್ಞಾನಭಾರತಿ, ವಿಶ್ವಭಾರತಿ, ಅಂಜನಾಪುರ, ಹೆಚ್ ಬಿಆರ್ ಲೇ ಔಟ್, ಒಎಂಬಿಆರ್ ಲೇ ಔಟ್ ಮೊದಲಾದ ಕಡೆಗಳಲ್ಲಿ ಇವೆ. ಉತ್ತಮ ಗಾಳಿ, ಬೆಳಕು ಮತ್ತು ರಸ್ತೆಗೆ ಹತ್ತಿರವಿರುವುದರಿಂದ ಇತರ ಬಿಡಿಎ ನಿವೇಶನಗಳಿಗಿಂತ ಶೇಕಡಾ 20ರಷ್ಟು ಹೆಚ್ಚು ಬೆಲೆಯಿರುತ್ತದೆ. 
ಪ್ರತಿ 15 ದಿನಗಳಿಗೊಮ್ಮೆ 40ರಿಂದ 50 ಮೂಲೆ ನಿವೇಶನಗಳ ಇ-ಹರಾಜಿನ ಬಗ್ಗೆ ಜಾಹಿರಾತು ನೀಡಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!