ರಾಜ್ಯ

ಮೈಸೂರು: ತಾವು ಕಲಿತ ಶಾಲೆಯಲ್ಲೇ ಮಕ್ಕಳಿಗೆ ಸಿದ್ದರಾಮಯ್ಯ ವ್ಯಾಕರಣ ಪಾಠ!

Shilpa D
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಾಕರಣ ಪಾಠ ಹೇಳಿಕೊಡುವ ಮೂಲಕ ಕೆಲ ಕಾಲ ಶಿಕ್ಷಕರಾಗಿದ್ದರು. 
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ತಾಲೂಕಿನ ಕುಪ್ಪೇಗಾಲದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು.
ಈ ವೇಳೆ ಶಿಕ್ಷಕರು, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು ಹಾಗೂ ಮಕ್ಕಳು ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಜೊತೆಗೆ ಮೈಸೂರು ಪೇಠ ತೊಡಿಸಿ ಸನ್ಮಾನಿಸಿದರು.
ತಮ್ಮ ಎಡೆಬಿಡದ ಕಾರ್ಯಕ್ರಮಗಳ ಮಧ್ಯೆ ಬಿಡುವು ಮಾಡಿಕೊಂಡು ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ ಮಾಡಿದರು.
ನಾನು ಓದಿದ ಶಾಲೆಯ ಋಣ ತೀರಿಸುವುದಕ್ಕಾಗಿ ನನ್ನ ಸ್ವಂತ ಹಣದಿಂದ ಶಾಲೆಗೆ ಕಾಂಪೌಂಡ್, ಗ್ರಂಥಾಲಯ ಕಟ್ಟಿಸಿಕೊಡುತ್ತೇನೆ. ಅಲ್ಲದೆ, ಸರ್ಕಾರದಿಂದ ಈಗಾಗಲೇ 10 ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. 
ಖಾಸಗಿ ಶಾಲೆಗಳಲ್ಲಿ ಓದು ಮಕ್ಕಳು ಬುದ್ಧಿವಂತರಾಗಿರುತ್ತಾರೆ ಎಂಬ ತಪ್ಪುಗ್ರಹಿಕೆಯಿದೆ, ಆದರೆ ಖಾಸಗಿ ಶಾಲಾ ಮಕ್ಕಳಿಗಿಂತ ಸರ್ಕಾರಿ ಶಾಲಾ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವುದರಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 
ತಾವು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಲು ಸಹಾಯ ಮಾಡಿದ ತಮ್ಮ ಶಿಕ್ಷಕರಾದ ನಂಜೇಗೌಡ ಮತ್ತು ರಾಜಪ್ಪ ಅವರಿದೆ ನಮನ ಸಲ್ಲಿಸಿದರು. 
SCROLL FOR NEXT