ಬೆಂಗಳೂರು: ಆರ್ ಕೆ ನಗರ ಚುನಾವಣೆ ಮುಗಿದು ಶಾಸಕರಾಗಿ ಆಯ್ಕೆಯಾದ ಟಿಟಿವಿ ದಿನಕರನ್ ಇಂದು ಬೆಳಗ್ಗೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕ ಶಶಿಕಾಲಾ ಅವರನ್ನು ಬೇಟಿಯಾಗಿದ್ದಾರೆ. ಉಪಚುನಾವಣೆ ಮುಂಗಿದ ನಂತರಿದು ಶಶಿಕಲಾ ಅವರೊಡನೆ ದಿನಕರನ್ ಅವರ ಮೊದಲ ಭೇಟಿ ಇದಾಗಿದೆ.
ಇತ್ತೀಚೆಗೆ ನಡೆದ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.
ಶಶಿಕಲಾ ಅವರಿಂದ ಆಶೀರ್ವಾದ ಪಡೆದ ದಿನಕರನ್ ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಬಗೆಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧ ವಿಕೆ ಶಶಿಕಲಾ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos