ರಾಜ್ಯ

ಕಾಕತಿ ಗ್ಯಾಂಗ್ ರೇಪ್ ಪ್ರಕರಣ: ಮತ್ತೊರ್ವನ ಬಂಧನ, ತಪ್ಪೊಪ್ಪಿಕೊಂಡ ಆರೋಪಿಗಳು

Lingaraj Badiger
ಬೆಳಗಾವಿ: ಕಾಕತಿಯ ಅರಣ್ಯ ಪ್ರದೇಶದಲ್ಲಿ ಗೆಳೆಯನೊಂದಿಗೆ ಸುತ್ತಾಡಲು ಹೋಗಿದ್ದ ಅಪ್ರಾಪ್ತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತ ಬೆಳಗಾವಿ ಪೊಲೀಸರು ಬುಧವಾರ ಮತ್ತೊರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಒಟ್ಟು 6 ಆರೋಪಿಗಳ ಪೈಕಿ ನಿನ್ನೆ ಮೂವರನ್ನು ಬಂಧಿಸಿದ್ದ ಪೊಲೀಸರು ಇಂದು ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದು, ಉಳಿದ ಇಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳನ್ನು ಮುತ್ಯಾನಟ್ಟಿ ನಿವಾಸಿ ಸಂಜು ಅಲಿಯಾಸ್ ಬಾಬಾ ಸಿದ್ದಪ್ಪ ದಡ್ಡಿ(24), ಬೆಳಗಾವಿ ನಿವಾಸಿ ಸುರೇಶ್ ಅಲಿಯಾಸ್ ಕಾಚಾ ಬರಮಪ್ಪ(24), ಮುತ್ಯಾನಟ್ಟಿ ನಿವಾಸಿ ಸುನಿಲ್ ಅಲಿಯಾಸ್ ಯಲ್ಲಪ್ಪ ಲಗಮಣ್ಣ ರಾಜಾಕಟ್ಟಿ(21) ಹಾಗೂ ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮದ ಮಹೇಶ್ ಬಾಳಪ್ಪ ಶಿವಣ್ಣಗೊಳ್(23) ಎಂದು ಗುರುತಿಸಲಾಗಿದೆ. ಈ ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಫೆಬ್ರವರಿ 15ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗೆಳೆಯನೊಂದಿಗೆ ಸುತ್ತಾಡುತ್ತಿದ್ದ 16 ವರ್ಷದ ಬಾಲಕಿಯ ಮೇಲೆ ಕಾಮುಕ ಯುವಕರ ಗುಂಪೊಂದು ಗ್ಯಾಂಗ್‌ ರೇಪ್‌ ಎಸಗಿ ಬೆದರಿಕೆ ಹಾಕಿರುವ ಕುರಿತು ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT