ಹೊಸಕೆರೆಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ 
ರಾಜ್ಯ

ಬೆಂಗಳೂರು: ಹೊಸಕೆರೆ ಹಳ್ಳಿಯಲ್ಲಿ ಪತ್ತೆಯಾಗಿದ್ದು ಕ್ರಿ.ಶ.1000ರ ಚೋಳರ ಕಾಲದ ತೂಬು

ಒಂದು ತಿಂಗಳ ಹಿಂದೆ ಹೊಸಕೆರೆ ಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವಾಗ ದೊರೆತ ಮಂಟಪ ಚೋಳರ ಕಾಲದಲ್ಲಿ ಕೆರೆಗೆ ನಿರ್ಮಿಸಿದ ತೂಬು ಎಂದು ಗೊತ್ತಾಗಿದೆ...

ಬೆಂಗಳೂರು: ಒಂದು ತಿಂಗಳ ಹಿಂದೆ ಹೊಸಕೆರೆ ಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವಾಗ ದೊರೆತ ಮಂಟಪ ಚೋಳರ ಕಾಲದಲ್ಲಿ ಕೆರೆಗೆ ನಿರ್ಮಿಸಿದ ತೂಬು ಎಂದು ಗೊತ್ತಾಗಿದೆ. ಇದು ಕ್ರಿ.ಶ 1000 ವರ್ಷದ ತೂಬುಗೇಟು ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಕೆರೆ ಕೋಡಿ ಸಮೀಪ ಸುಮಾರು 25 ಅಡಿ ಆಳದಲ್ಲಿ ದೊರೆತ ಈ ಕಲ್ಲಿನ ಮಂಟಪ ಕೆಂಪೇಗೌಡರ ಕಾಲದಲ್ಲಿ ಬಾಗಿನ ಅರ್ಪಿಸಲು ಬಳಸುತ್ತಿದ್ದ ಗಂಗಮ್ಮನ ತೊಟ್ಟಿಲು ಎಂಬ ಊಹಾಪೋಹ ಹುಟ್ಟಿಕೊಂಡಿತ್ತು.

ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು ಅದು ಚೋಳರ ಕಾಲದ ಮಂಟಪ ಎಂದಿದ್ದರು. ಈಗ ಸಮಗ್ರ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅದು ಮಂಟಪವಲ್ಲ, ಕೆರೆಗೆ ನಿರ್ಮಿಸಿರುವ ತೂಬು ಎಂದು ಸ್ಪಷ್ಟಪಡಿಸಿದ್ದಾರೆ.

ಮಂಟಪದಲ್ಲಿನ ಕೆತ್ತನೆಯನ್ನು ನೋಡಿ ಚೋಳರ ಕಾಲದ ಮಂಟಪ ಎಂದಷ್ಟೆ ತಿಳಿದು ಬಂದಿತ್ತು. ಆಗ ಕೆರೆಯಲ್ಲಿ ನೀರು ಇದ್ದಿದ್ದರಿಂದ ಪೂರ್ಣ ಪರಿಶೀಲನೆ ಸಾಧ್ಯವಾಗಿರಲಿಲ್ಲ. ಹೂಳು ತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಇದು ಚೋಳರ ಕಾಲದ್ದು ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ. ಆರ್ ಗೋಪಾಲ್ ಹೇಳಿದ್ದಾರೆ.

ಕೃಷಿಗಾಗಿ ಕಾಲುವೆಗಳ ಮೂಲಕ ನೀರು ಬಿಡಲು ಗೇಟುಗಳನ್ನು ಅಳವಡಿಸಲು ಅಗತ್ಯವಿರುವ ಎರಡು ದೊಡ್ಡ ರಂಧ್ರಗಳು ಈ ಮಂಟಪದಲ್ಲಿವೆ. ಸಾಮಾನ್ಯವಾಗಿ ಮಂಟಪ, ದೇವಸ್ಥಾನಗಳಿಗೆ ಈ ರೀತಿಯ ರಂಧ್ರ ಮಾಡುವುದಿಲ್ಲ. ಹಾಗಾಗಿ ಪತ್ತೆಯಾಗಿರುವುದು ಗುಡಿಯ ಮಂಟಪವಲ್ಲ ತೂಬು ಎಂಬುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

15  ಅಡಿ ಅಗಲ 10 ಅಡಿ ಎತ್ತರದ ಈ ಕಲ್ಲಿನ ತೂಬು ಇದಾಗಿದೆ.  ಮಂಟಪದಲ್ಲಿ ನಾಲ್ಕು ಕಲ್ಲಿನ ಕಂಬಗಳಿದ್ದು, ಕಲ್ಲಿನಿಂದಲೇ ಮಾಡಿದ ಮೇಲ್ಚಾವಣಿ ಇದೆ. 56 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸುಮಾರು ವರ್ಷಗಳಿಂದ ಹೂಳು ತೆಗೆದಿರಲಿಲ್ಲ. ಏಳು ತಿಂಗಳಿಂದ ಈ ಕೆರೆಯ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ.  ಅದರಲ್ಲಿ 6 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT