ಸಾಂದರ್ಭಿಕ ಚಿತ್ರ 
ರಾಜ್ಯ

ಭಾರತದಲ್ಲಿ ಹೆಚ್ಚು ಸಿಸಿಟಿವಿ ಅಳವಡಿಸಿರುವುದು ಕರ್ನಾಟಕದಲ್ಲಿ

ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ, ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ...

ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ, ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಜನವರಿ 1, 2016ರವರೆಗಿನ ಅಂಕಿಅಂಶ ಪ್ರಕಾರ,ಕರ್ನಾಟಕ ಪೊಲೀಸರು 3,952 ಕ್ಯಾಮರಾ/ಸಿಸಿಟಿವಿಗಳನ್ನು ಸಂಚಾರ ದಟ್ಟಣೆ, ಸುರಕ್ಷತೆ ಮತ್ತು ತನಿಖೆಯ ಉದ್ದೇಶದ  ಸಲುವಾಗಿ ಅಳವಡಿಸಿದೆ. ಕರ್ನಾಟಕದ ನಂತರ ಮಧ್ಯ ಪ್ರದೇಶ(2,977), ಕೇರಳ(2,458),  ಆಂಧ್ರ ಪ್ರದೇಶ(2,443) ಮತ್ತು ರಾಜಸ್ತಾನಗಳಲ್ಲಿ 2,025 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಆಸಕ್ತಿಕರ  ಸಂಗತಿಯೆಂದರೆ  ದಕ್ಷಿಣ ಭಾರತದಲ್ಲಿ ಅತ್ಯಂತ ಕಡಿಮೆ ಪೊಲೀಸ್ ಸಿಬ್ಬಂದಿಯಿರುವುದು ಆಂಧ್ರ ಪ್ರದೇಶದ ನಂತರ ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನರಿಗೆ ಪೊಲೀಸ್ ರ ಅನುಪಾತ 1:876 ಅಂತರದಲ್ಲಿದೆ. ವಿಶ್ವ ಸಂಸ್ಥೆಯ ಪ್ರಕಾರ ಪ್ರತಿ 454 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿಯಿರಬೇಕು.
ಭದ್ರತೆ, ರಕ್ಷಣೆ ದೃಷ್ಟಿಯಿಂದ ಕಾರ್ಯಕರ್ತರು ಬೆಂಗಳೂರು ನಗರವೊಂದರಲ್ಲಿಯೇ 5,000 ಕ್ಯಾಮರಾಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.
ಭಾರತ ದೇಶದ ಕೆಲವು ರಾಜ್ಯಗಳಲ್ಲಿ  ಒಬ್ಬ ಪೊಲೀಸ್ ಸಿಬ್ಬಂದಿಗೆ ಇರುವ ಜನಸಂಖ್ಯೆ ಇಂತಿದೆ: 
ಉತ್ತರ ಪ್ರದೇಶ 1,192
ಪಶ್ಚಿಮ ಬಂಗಾಳ 1,374
ಬಿಹಾರ 1,103
ಆಂಧ್ರ ಪ್ರದೇಶ 1,044
ಮಧ್ಯ ಪ್ರದೇಶ 892
ಗುಜರಾತ್ 887
ಕರ್ನಾಟಕ 876
ಒಟ್ಟು ಭಾರತ 729 

ಕರ್ನಾಟಕದ ಅಂಕಿಅಂಶ
ಪ್ರತಿ ಪೊಲೀಸ್ ಸಿಬ್ಬಂದಿಗೆ ಮಂಜೂರಾಗಿರುವ ಜನಸಂಖ್ಯೆ: 564
ವಾಸ್ತವವಾಗಿ ಇರುವುದು :  876   
ಪ್ರತಿ ಪೊಲೀಸ್ ಸಿಬ್ಬಂದಿಯ ಕಾರ್ಯನಿರ್ವಹಣೆಯ ಪ್ರದೇಶ, ಮಂಜೂರಾಗಿರುವುದು: 1.74 ಚದರ ಕಿಲೋ ಮೀಟರ್
ವಾಸ್ತವವಾಗಿ ಇರುವುದು: 2.7 ಚದರ ಕಿಲೋ ಮೀಟರ್ 
ಪ್ರತಿ 100 ಪೊಲೀಸ್ ಸಿಬ್ಬಂದಿಗೆ ಮಂಜೂರಾಗಿರುವುದು 10.90 ವಾಸ್ತವವಾಗಿ ಇರುವುದು 16.94 ಆಗಿದೆ.                        

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT