ಸಾಂದರ್ಭಿಕ ಚಿತ್ರ 
ರಾಜ್ಯ

ಸಿಂಗಾಪುರ ಪ್ರವಾಸಕ್ಕೆ ತೆರಳಲು ಮಹಿಳಾ ಪೌರ ಕಾರ್ಮಿಕರ ನಿರಾಸಕ್ತಿ

ಪೌರ ಕಾರ್ಮಿಕರಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಿಂಗಾಪೂರ ಪ್ರವಾಸಕ್ಕೆ ತೆರಳಲು ಮಹಿಳಾ ಪೌರ ಕಾರ್ಮಿಕರು ಹಿಂದೇಟು ಹಾಕಿದ್ದಾರೆ, ಹೊರಗಿನ ...

ಬೆಂಗಳೂರು: ಪೌರ ಕಾರ್ಮಿಕರಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಿಂಗಾಪೂರ ಪ್ರವಾಸಕ್ಕೆ ತೆರಳಲು ಮಹಿಳಾ ಪೌರ ಕಾರ್ಮಿಕರು ಹಿಂದೇಟು ಹಾಕಿದ್ದಾರೆ, ಹೊರಗಿನ ಪ್ರಪಂಚದ ಜೊತೆ ಹೊಂದಾಣಕೆ ಸಮಸ್ಯೆಯಿಂದಾಗಿ ಮಹಿಳಾ ಪೌರ ಕಾರ್ಮಿಕರು ಪ್ರವಾಸದಿಂದ ಹೊರಗುಳಿದಿದ್ದಾರೆ.
ನಗರದಲ್ಲಿ ಸುಮಾರು ಶೇ.75 ರಷ್ಟು ಮಹಿಳೆಯರು ಪೌರ ಕಾರ್ಮಿಕರಿದ್ದಾರೆ. ಅದರಲ್ಲಿ ಕೇವಲ ಶೇ, 10 ರಷ್ಟು ಪೌರ ಕಾರ್ಮಿಕರು ಪ್ರವಾಸಕ್ಕೆ ತೆರಳಲು ಆಸಕ್ತಿ ತೋರಿಲ್ಲ, ಘನತ್ಯಾಜ್ಯ ನಿರ್ವಹಣೆ ಸಂಬಂಧ ವೈಜ್ಞಾನಿಕವಾಗಿ ಮಾಹಿತಿ ನೀಡಲು ಸಿಂಗಾಪೂರ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಮೊದಲ ತಂಡದಲ್ಲಿ 40 ಕಾರ್ಮಿಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಅದರಲ್ಲಿ ಕೇವಲ 3 ಮಂದಿ ಮಾತ್ರ ಮಹಿಳಾ ಪೌರ ಕಾರ್ಮಿಕರು ತೆರಳುತ್ತಿದ್ದಾರೆ. ಜುಲೈ 4 ರಂದು ತೆರಳುವ ಮೊದಲ ತಂಡ 5 ದಿನಗಳ ಪ್ರವಾಸ ಕೈಗೊಳ್ಳಲಿದೆ. ಶ್ರೀರಂಗಪಟ್ಟಣ ಟೌನ್ ಮುನಿಸಿಪಲ್ ಕೌನ್ಸಿಲ್, ಎಂಜಿನೀಯರ್, ಅಶ್ವಿನಿ ಬಿ,ಜೆ , ಅಳಾನವರ್ ಪಟ್ಟಣ ಪಂಚಾಯ್ತಿ ಕಾರ್ಮಿಕರಾದ ಸಾವಿತ್ರಿ ಗುಟ್ಟಿ, ಮಂಗಳೂರು ಸಿಟಿ ಕಾರ್ಪೋರೇಷನ್ ನಿಂದ ವಿಜಯಲಕ್ಷಿ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಸರಿಸುಮಾರು 1 ಸಾವಿರ ಪೌರ ಕಾರ್ಮಿಕರಿಗೆ ಸಿಂಗಪೂರ್‌ನ ಸ್ವಚ್ಛತೆ ಪಾಠ ಹೇಳಿಕೊಡಲು ಮುಂದಾಗಿರುವ ರಾಜ್ಯ ಸರ್ಕಾರ ಪೌರಾಡಳಿತ ಸಚಿವಾಲಯದ ಮೂಲಕ ಪೌರ ಕಾರ್ಮಿಕರಿಗೆ ಸಿಂಗಪೂರ್ ಸ್ವಚ್ಛತೆಯ ನೇರ ದರ್ಶನ ಮಾಡಿಸಲಿದೆ. ಈಶ್ವರ್ ಖಂಡ್ರೆ ಈ ಪ್ರವಾಸದ ನೇತೃತ್ವ ವಹಿಸಿದ್ದಾರೆ. 
ಪೌರಾಡಳಿತ ಇಲಾಖೆ ಪ್ರತಿ ಪೌರ ಕಾರ್ಮಿಕರ ಮೇಲೆ 75 ಸಾವಿರ ರೂ. ವೆಚ್ಚ ಮಾಡುತ್ತಿದೆ. ಜತೆಗೆ ಅವರ ಖರ್ಚಿಗೂ 5 ಸಾವಿರ ರೂ. ಹೆಚ್ಚುವರಿಯಾಗಿ ಒದಗಿಸಲಿದೆ.
ನೌಕರಿ ಖಾಯಂ ಆಗಿರುವ ಪೌರ ಕಾರ್ಮಿಕರು ಪ್ರವಾಸಕ್ಕೆ ಹೋಗಲಿದ್ದಾರೆ. 30 ರಿಂದ 55 ವರ್ಷದೊಳಗಿನ ನೌಕರರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಕೇವಲ ಒಬ್ಬ ಮಹಿಳಾ ಪೌರ ಕಾರ್ಮಿಕರು ಪ್ರವಾಸಕ್ಕೆ ತೆರಳಲು ಆಸಕ್ತಿ ತೋರಿಲ್ಲ ,ಹಲವು ಕಾರ್ಮಿಕರ ಬಳಿ ಪಾಸ್ ಪೋರ್ಟ್ ಇಲ್ಲ, ಜೊತೆಗೆ ಪ್ರವಾಸಕ್ಕೆ ತೆರಳಲು ಮುಜುಗರ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT