ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ 
ರಾಜ್ಯ

100 ಸ್ಟಾರ್ಟ್ಅಪ್ ಉದ್ಯಮಗಳಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು

ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಎಲೆವೇಟ್-2017 ಎಂಬ...

ಬೆಂಗಳೂರು: ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಎಲೆವೇಟ್-2017 ಎಂಬ ಅಭಿಯಾನವನ್ನು ಕೈಗೊಳ್ಳಲಿದೆ. ಇದರಡಿ 100 ಹೊಸ ಸೃಜನಾತ್ಮಕ ಸ್ಟಾರ್ಟ್ ಅಪ್ ಗಳಿಗೆ ಸಹಾಯವಾಗಲಿದೆ. ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಈ ಸ್ಟಾರ್ಟ್ ಅಪ್ ಗೆ ಮೀಸಲಾದ ವೆಬ್ ಸೈಟ್ ನ್ನು ನಿನ್ನೆ ಉದ್ಘಾಟಿಸಿದರು. ಇಲ್ಲಿ ಸ್ಟಾರ್ಟ್ ಅಪ್ ಉದ್ಯಮಿಗಳು ತಮಗೆ ಬೇಕಾದ ಆಲೋಚನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ವೆಬ್ ಸೈಟ್ ನ ಹೆಸರು www.elevate.bengaluruite.biz ರಾಜ್ಯ ಸರ್ಕಾರ ಸ್ಟಾರ್ಟ್ ಅಪ್ ಯೋಜನೆಗಳನ್ನು ಹೊಂದಿದ್ದು ಮುಂದಿನ 5 ವರ್ಷಗಳಲ್ಲಿ 20,000 ಸ್ಟಾರ್ಟ್ಅಪ್ ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅದು ಕೃಷಿಯಿಂದ ಹಿಡಿದು ವಿಮಾನಯಾನದವರೆಗೆ ಯಾವುದೇ ವಲಯಗಳಿಂದಾಗಿರಲಿ. ಇದರ ಭಾಗವಾಗಿ ಸರ್ಕಾರ ಎಲೆವೇಟ್-2017ನ್ನು ಆರಂಭಿಸಿದ್ದು, 100 ಅತ್ಯುತ್ತಮ ಸ್ಟಾರ್ಟ್ಅಪ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಹಣಕಾಸು ಸೇವೆ ಒದಗಿಸುವುದಾಗಿದೆ ಎಂದು ಹೇಳಿದರು.
ಮಾರ್ಗದರ್ಶಕರನ್ನು ಪಡೆಯುವುದು, ಸಂಪರ್ಕಜಾಲದ ಅವಕಾಶಗಳನ್ನು ಅಭಿವೃದ್ಧಿಪಡಿಸುವುದು, ಕಲ್ಪನೆಯ ಊರ್ಜಿತಗೊಳಿಸುವಿಕೆ ಇತ್ಯಾದಿಗಳನ್ನು ಒದಗಿಸುತ್ತದೆ. ಎಲ್ಲಾ ಸ್ಟಾರ್ಟ್ ಅಪ್ ಗಳಿಗೆ ಹಣದ ಸಹಾಯ ಬೇಕಾಗುವುದಿಲ್ಲ, ನಾವು ತಾಂತ್ರಿಕ ಮತ್ತು ವ್ಯಾಪಾರ ನೆರವನ್ನು ಕೂಡ ನೀಡುತ್ತೇವೆ ಎಂದು ಹೇಳಿದರು. ಐಟಿ ಬಿಟಿ ಇಲಾಖೆ ಮುಕ್ತ ಸಭೆಗಳನ್ನು ಆಸಕ್ತ ಜನರೊಂದಿಗೆ ಮೈಸೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಂಗಳೂರುಗಳಲ್ಲಿ ನಡೆಸಲಿದೆ. ಮುಂಚೆ ಪ್ರಾಮುಖ್ಯತೆಯನ್ನು ಹೆಚ್ಚಾಗಿ ಬೆಂಗಳೂರಿಗೆ ನೀಡಲಾಗುತ್ತಿತ್ತು,ಇದೇ ಮೊದಲ ಬಾರಿಗೆ ಸ್ಟಾರ್ಟ್ ಅಪ್ ಗಳ ಕುಂದುಕೊರತೆ, ಆಸಕ್ತಿಗಳ ಬಗ್ಗೆ ವಿಚಾರಿಸಲು ಸಣ್ಣ ನಗರಗಳಿಗೆ ಹೋಗುತ್ತಿದ್ದೇವೆ ಎಂದರು.
ಎರಡನೇ ಶ್ರೇಣಿ ನಗರಗಳಲ್ಲಿನ ಜನರನ್ನು ಉತ್ತೇಜಿಸಲು ಮತ್ತು ಸೆಳೆಯಲು ಈ ಪ್ರಯತ್ನವಾಗಿದೆ. ಆಗಸ್ಟ್ 5ರಿಂದ ಅಧಿಕಾರಿಗಳು ಈ ಸ್ಥಳಗಳಿಗೆ ಹೋಗಲಿದ್ದಾರೆ. ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಗೆ ಸಂಬಂಧಪಟ್ಟ ರೋಡ್ ಶೋ ಇರಲಿದೆ ಎಂದರು.
ನಿನ್ನೆಯಿಂದ ಇದೇ 18ರವರೆಗೆ ಜನರು ಸ್ಟಾರ್ಟ್ ಅಪ್ ನ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದು. ಜನರ ಆಲೋಚನೆಗಳು ಸೃಜನಾತ್ಮಕವಾಗಿದ್ದು ಕರ್ನಾಟಕಕ್ಕೆ ಆಧಾರಿತವಾಗಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT