ಹಾನಿಗೊಳಗಾಗಿರುವ ಶಿವಲಿಂಗ 
ರಾಜ್ಯ

ಚಿತ್ರದುರ್ಗ: ನಿಧಿ ಕಳ್ಳರಿಗೆ ಐತಿಹಾಸಿಕ ಶಿವಲಿಂಗಗಳೇ ಟಾರ್ಗೆಟ್

ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಿಧಿಗಳ್ಳರಿಂದ ತೊಂದರೆಗೆ ಸಿಲುಕುತ್ತಿವೆ. ಇತ್ತೀಚೆಗೆ ಧವಳಪ್ಪನಗುಡ್ಡದಲ್ಲಿರುವ ಶಿವಲಿಂಗಗಳನ್ನು ನಿಧಿಗಳ್ಳರು ಟಾರ್ಗೆಟ್ ...

ಚಿತ್ರದುರ್ಗ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಿಧಿಗಳ್ಳರಿಂದ ತೊಂದರೆಗೆ ಸಿಲುಕುತ್ತಿವೆ. ಇತ್ತೀಚೆಗೆ ಧವಳಪ್ಪನಗುಡ್ಡದಲ್ಲಿರುವ ಶಿವಲಿಂಗಗಳನ್ನು ನಿಧಿಗಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.
ಬೆಟ್ಟದ ಮೇಲಿರುವ 21 ಶಿವಲಿಂಗಗಳಲ್ಲಿ ಹೆಚ್ಚಿನ ಸಂಖ್ಯೆಯ ಲಿಂಗಗಳನ್ನು ಕಬ್ಬಿಣದ ರಾಡಿನಿಂದ ಹೊಡೆದು ಮುರಿಯಲಾಗಿದೆ. ಲಿಂಗಗಳಿಗೆ ಹಾನಿಯಾಗಿರುವುದು ಪತ್ರಕರ್ತರು ಮತ್ತು ನಡಿಗೆದಾರರ ಗಮನಕ್ಕೆ ಬಂದಿದೆ. ಇಡಿ ಧವಳಪ್ಪನಗುಡ್ಡ ನಿಧಿಗಳ್ಳರಿಗೆ ಸ್ವರ್ಗವಾಗಿದೆ, ಚಂದ್ರವಳ್ಳಿ ಪ್ರದೇಶಕ್ಕೆ ಕಾವಲು ಹಾಕಲಾಗಿದೆ, ಹೀಗಿರುವಾಗ ನಿಧಿಗಳ್ಳರು ಹೇಗೆ ಇಲ್ಲಿಗೆ ಪ್ರವೇಶಿಸುತ್ತಾರೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಚಂದ್ರವಳ್ಳಿ ವಲಯದಲ್ಲಿರುವ ಸ್ಮಾರಕಗಳು ಹಾಗೂ ವರ್ಣ ಚಿತ್ರಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಆದರೂ ಅವನ್ನು ನಮ್ಮ ವ್ಯಾಪ್ತಿಗೆ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಭಾರತದ ಪುರಾತತ್ವ ಸಮೀಕ್ಷೆ ಇಲಾಖೆ ಎಎಸ್ ಐ ಗಿರೀಶ್ ಹೇಳಿದ್ದಾರೆ.
ಒಂದು ವೇಳೆ ಪುರಾತತ್ವ  ಮತ್ತು ಸಂಗ್ರಹಾಲಯ ಇಲಾಖೆ ಈ ಸ್ಮಾರಕಗಳನ್ನು ನಮ್ಮ ವ್ಯಾಪ್ತಿಗೆ ನೀಡಿದರೇ, ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ. 
ವಿಗ್ರಹಗಳಿಗೆ ಹಾನಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅವರುಗಳ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ,
ಧವಳಪ್ಪನಗುಡ್ಡವನ್ನು ಕದಂಬ ವಂಶದ ಮಯೂರ ವರ್ಮ ಸ್ಥಾಪಿಸಿದ್ದು, ಅಲ್ಲಿ ಸ್ಥಾಪಿಸಿರುವ ಶಿವಲಿಂಗಗಳಿಗೆ ಪ್ರತಿನಿತ್ಯ ಮಯೂರ ವರ್ಮನಿಂದ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು ಎಂದು ಇತಿಹಾಸಕಾರ ಬಿ. ರಾಜಶೇಖರಪ್ಪ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT