ಸಾಂದರ್ಭಿಕ ಚಿತ್ರ 
ರಾಜ್ಯ

ಪುಷ್ಪಗುಚ್ಛದ ಬದಲಿಗೆ ಖಾದಿಯ ಕೈ ವಸ್ತ್ರ!

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಪುಷ್ಪಗುಚ್ಛದೊಂದಿಗೆ...

ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಪುಷ್ಪಗುಚ್ಛದೊಂದಿಗೆ ಸ್ವಾಗತಿಸುವುದು ಸಾಮಾನ್ಯ ಕ್ರಮ. ತುಮಕೂರಿನ ಶ್ರೀ ಸಿದ್ಧಾರ್ಥ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪುಷ್ಪಗುಚ್ಛದ ಬದಲಿಗೆ ಖಾದಿಯ ಕೈ ವಸ್ತ್ರ ನೀಡಿ ಅತಿಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ರಾಷ್ಟ್ರ ಮತ್ತು ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯಾಧಿಕಾರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೊನ್ನೆ ಶುಕ್ರವಾರ ಕಾಲೇಜಿನ ಮುಖ್ಯಸ್ಥರು ಅವರಿಗೆ ಖಾದಿ ಟವಲ್ ನ್ನು ನೀಡಿ ಸ್ವಾಗತಿಸಿದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಉಪ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ, ತಿಂಗಳ ಹಿಂದೆ, ತಮ್ಮ ಸ್ನೇಹಿತರೊಬ್ಬರು ಅವರ 70ನೇ ಜನ್ಮ ದಿನಾಚರಣೆಗೆ ಟ್ರಕ್ ತುಂಬಾ ಪುಷ್ಪಗುಚ್ಛ ಸಿಕ್ಕಿತ್ತು ಎಂದು ಹೇಳಿದ್ದರು. ಆಗ ನನಗೆ ಯೋಚನೆ ಬಂತು, ಪುಷ್ಪಗುಚ್ಛದ ಬದಲಿಗೆ ಅತಿಥಿಗಳಿಗೆ ಖಾದಿಯ ಕೈ ವಸ್ತ್ರವನ್ನು ಕೊಟ್ಟರೆ ಹೇಗೆ ಎಂದೆನಿಸಿತು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮುಂದೆ ಪ್ರಸ್ತಾಪವಿಟ್ಟಾಗ ಅವರು ಅದನ್ನು ಒಪ್ಪಿಕೊಂಡರು ಎಂದು ಹೇಳಿದರು. 
ಕಾರ್ಯಕ್ರಮದ ವೇಳೆ ಅತಿಥಿಗಳು ಖಾದಿಯ ಕೈ ವಸ್ತ್ರವನ್ನು ಬಳಸುವುದು ಕಂಡಿತು.  ಅವರಿಗೆ ಪುಷ್ಪಗುಚ್ಛ ಕೊಡುತ್ತಿದ್ದರೆ ಕಾರ್ಯಕ್ರಮವಾದ ಮೇಲೆ ಬಿಟ್ಟು ಹೋಗುತ್ತಿದ್ದರು.ನಂತರ ಅದನ್ನು ಎಸೆಯಲಾಗುತ್ತದೆ. ಅನಗತ್ಯ ಕಸ ಸೃಷ್ಟಿಸಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಡಾ.ಶೆಟ್ಟಿ ಹೇಳುತ್ತಾರೆ.
ಹೀಗಾಗಿ ವಿಶ್ವವಿದ್ಯಾಲಯದ ಎಲ್ಲಾ ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗೆ ಖಾದಿಯ ಕೈ ವಸ್ತ್ರವನ್ನು ನೀಡಿ ಸ್ವಾಗತಿಸುವ ಪದ್ಧತಿ ಜಾರಿಗೆ ಬರಲಿದೆಯಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ; ಬಹುಶಃ ಆ ರಾತ್ರಿ ಇಂದೇ ಆಗಿರಬಹುದು: ಟ್ರಂಪ್ ಕೊನೇಯ ಎಚ್ಚರಿಕೆ

IPL 2026: ಮಳೆಯಿಂದಾಗಿ KKR ಮತ್ತು PBKS ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ 1 ಅಂಕ!

ನಮ್ಮ ನಾಯಕರನ್ನು ಹುಡುಕಿ ಹುಡುಕಿ ಕೊಂದಾಕ್ಷಣ ಇರಾನ್ ಶಕ್ತಿ ನಾಶ ಆದಂತಲ್ಲ: ಅಮೆರಿಕಕ್ಕೆ ಮೊಜ್ತಬಾ ಖಮೇನಿ ಎಚ್ಚರಿಕೆ

ಅದು ಪೈಲಟ್ ರಕ್ಷಣಾ ಕಾರ್ಯಾಚರಣೆ ಅಲ್ಲ, ಯುರೇನಿಯಂ ಕಳ್ಳತನದ ಯತ್ನ, ಅದೂ ವಿಫಲವಾಗಿದೆ: ಅಮೆರಿಕ ವಿರುದ್ಧ ಇರಾನ್ ಆರೋಪ

ನಂಟು ಹೋಯ್ತು... ಗಂಟೂ ಹೋಯ್ತು....: ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳಿಗೆ ಶಾಕ್; RBI ಬ್ರೇಕ್

SCROLL FOR NEXT