ರಾಜ್ಯ

ಹಿಂದಿ ಕೇಂದ್ರಿತವಾದ ಬಿಜೆಪಿ ವೈವಿಧ್ಯತೆಯನ್ನು ಗೌರವಿಸುವುದಿಲ್ಲ: ದಿನೇಶ್ ಗುಂಡೂರಾವ್

Sumana Upadhyaya
ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕವಾದ ಧ್ವಜ ಇರಬಾರದೆಂದು ಯಾವುದೇ ಕಾನೂನು ಇಲ್ಲ. ಹಿಂದಿ ಕೇಂದ್ರಿತವಾಗಿರುವ ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ವೈವಿಧ್ಯತೆಯನ್ನು ಗೌರವಿಸುವುದಿಲ್ಲ ಎಂದು ಕಾಂಗ್ರೆಸ್ ಆಪಾದಿಸಿದೆ.
ರಾಜ್ಯ ಧ್ವಜದ ನಿರ್ಧಾರ ಕರ್ನಾಟಕ ಸರ್ಕಾರದ ರಾಜಕೀಯ ಗಿಮಿಕ್ ಎಂಬ ಕೇಂದ್ರದ ಆರೋಪವನ್ನು ನಿರಾಕರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡೂರಾವ್, ಬಿಜೆಪಿ ಒಂದೇ ರೀತಿಯ ವೈವಿಧ್ಯತೆಯಿಲ್ಲದ ದೇಶವನ್ನು ನೋಡಲು ಬಯಸುತ್ತದೆ. ಕರ್ನಾಟಕದಲ್ಲಿರುವ ವಿರೋಧ ಪಕ್ಷ ಬಿಜೆಪಿ ಹಿಂದಿ ಕೇಂದ್ರಿತವಾಗಿದೆ. ಅವರು ಒಂದೇ ರೀತಿಯ ದೇಶವನ್ನು ನೋಡಲು ಬಯಸುತ್ತಾರೆ. ಆ ಪಕ್ಷದವರು ಬೇರೆಯವರನ್ನು ನಂಬುವುದಿಲ್ಲ. ಅವರು ವೈವಿಧ್ಯತೆಯನ್ನು ಗೌರವಿಸುವುದು ಕೂಡ ಇಲ್ಲ ಎಂದು ಹೇಳಿದರು.
ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಧ್ವಜ ಬೇಕೆಂದರೆ ಅದರ ಅರ್ಥ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದಲ್ಲ. 
SCROLL FOR NEXT