ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ವಿದ್ಯುತ್ ತಂತಿಗೆ ಸಿಲುಕಿ ಅಪಾರ್ಟ್ ಮೆಂಟಿನ 3ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ಮತ್ತಿಕೆರೆಯ ಅಪಾರ್ಟ್ ಮೊಂಟ್ ವೊಂದರ ಮೂರನೇ ಮಹಡಿಯಿಂದ 31 ವರ್ಷದ ಟೆಕ್ಕಿ ಉದ್ಯೋಗಿ...

ಬೆಂಗಳೂರು: ಮತ್ತಿಕೆರೆಯ ಅಪಾರ್ಟ್ ಮೊಂಟ್ ವೊಂದರ ಮೂರನೇ ಮಹಡಿಯಿಂದ 31 ವರ್ಷದ ಟೆಕ್ಕಿ ಉದ್ಯೋಗಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಮೊನ್ನೆ ರಾತ್ರಿ ನಡೆದಿದೆ.
ವಿದ್ಯುತ್ ತಂತಿಗೆ ಸಿಲುಕಿ ತನ್ನ ಬಾಲ್ಕನಿಯ ಗೋಡೆಯ ಮೇಲೆ ಬಿದ್ದು ಮೃತಪಟ್ಟಿರುವುದಾಗಿ ಟೆಕ್ಕಿಯ ಸೋದರ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ವೈಟ್ ಫೀಲ್ಡ್ ನ ಐಟಿಪಿಎಲ್ ನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವಿದ್ಯಾಶಂಕರ ಮಿಶ್ರಾ ಎಂದು ಗುರುತಿಸಲಾಗಿದೆ.
ಇವರು ತಮ್ಮ ಕಿರಿಯ ಸೋದರ ಯೋಗಿಶ್ ಜೊತೆ ವಾಸಿಸುತ್ತಿದ್ದು ಅವರು ಕೂಡ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರಿಬ್ಬರೂ ಮೊನ್ನೆ ಬುಧವಾರ ತಡರಾತ್ರಿಯವರೆಗೆ ಮದ್ಯಪಾನ ಮಾಡಿ 1.30ರ ಹೊತ್ತಿಗೆ ಊಟಕ್ಕೆ ಕುಳಿತರು.ಊಟದ ಮಧ್ಯೆ ವಿದ್ಯಾಶಂಕರ್ ಅಪಾರ್ಟ್ ಮೆಂಟ್ ನ ಬಾಲ್ಕನಿಗೆ ತೆರಳಿದರು. ಕುಡಿದ ಮತ್ತಿನಲ್ಲಿದ್ದ ವಿದ್ಯಾಶಂಕರ್ ವಿದ್ಯುತ್ ತಂತಿಯ ಮೇಲೆ ಸಿಕ್ಕಿಹಾಕಿಕೊಂಡು ಬಾಲ್ಕನಿಯಿಂದ ಕೆಳಗೆ ಬಿದ್ದರು. ವಿದ್ಯಾಶಂಕರ್ ಎಷ್ಟು ಹೊತ್ತಾದರೂ ಮರಳಿ ಬಾರದಿದ್ದಾಗ ಯೋಗಿಶ್ ಕೆಳಗೆ ಹೋಗಿ ಹುಡುಕಾಡಿದಾಗ ತಮ್ಮ ಸೋದರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂತು.
ಮದುವೆಯಾಗದಿದ್ದ ಮಿಶ್ರಾ ಅಪಾರ್ಟ್ ಮೆಂಟ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದಾರೆ. 
ಅಪಾರ್ಟ್ ಮೆಂಟಿನ ಸುರಕ್ಷತೆ ಬಗ್ಗೆ ನಾವು ಕಟ್ಟಡ ಮಾಲೀಕರಿಂದ ಹೇಳಿಕೆ ಪಡೆದಿದ್ದೇವೆ. ಅಸಹಜ ಸಾವಿನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT